ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ ನಾಪತ್ತೆ : ಇಡಿ ವಿಚಾರಣೆಗೆ ಸಿಗುತ್ತಿಲ್ಲ ಎನ್ಸಿಪಿ ಮುಖಂಡ | ಜನತಾ ನ್ಯೂಸ್
ನವದೆಹಲಿ : ಮಹಾರಾಷ್ಟ್ರದ ಮಹಾ ಆಘಾಡಿ ಮಹಾಘಟಬಂಧನ ಸರ್ಕಾರದ ಮಾಜಿ ಗೃಹ ಸಚಿವ ಹಾಗೂ ಎನ್ಸಿಪಿ ಹಿರಿಯ ಮುಖಂಡ ಅನಿಲ್ ದೇಶಮುಖ್ ನಾಪತ್ತೆ ಯಾಗಿರುವ ಆಘಾತಕಾರಿ ವಿಷಯವನ್ನು ಜಾರಿ ನಿರ್ದೇಶನಾಲಯ(ಇಡಿ) ಹೊರಹಾಕಿದೆ.
ನಾವು ಆತನೊಂದಿಗೆ (ಅನಿಲ್ ದೇಶಮುಖ) ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆತ ಎಲ್ಲಿದ್ದಾನೆಂದು ನಮಗೆ ಗೊತ್ತಿಲ್ಲ. ಆತನ ನಿಖರವಾದ ಸ್ಥಳ ತಿಳಿದಿಲ್ಲ. ಇಂದಿನ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಇಂದಿನ ಆದೇಶದ ನಂತರ ಅವರು ತನಿಖೆಗೆ ಸಹಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ, ಎಂದು ಇಡಿ ಮೂಲಗಳು ತಿಳಿಸಿರುವುದಾಗಿ ಎಏನ್ಐ ಪ್ರಕಟಿಸಿದೆ.
ಜಾರಿ ನಿರ್ದೇಶನಾಲಯವು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಆತನ ಮಗ ಹೃಷಿಕೇಶ್ ದೇಶಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದಿದೆ.
ಇದಕ್ಕೂ ಮೊದಲು, ಹಪ್ತಾ ವಸೂಲಿ ಮಾಡುವ ಮೂಲಕ ಪೋಲಿಸ್ ಅಧಿಕಾರಿಗಳಿಂದ 100 ಕೋಟಿ ರೂ.ಗಳ ಬೇಡಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್ಸಿಪಿ ಮುಖಂಡರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ಎಫ್ಐಆರ್ ದಾಖಲಿಸಿದ ಕೆಲವೇ ದಿನಗಳಲ್ಲಿ ಇಡಿ ಕೂಡ ದೇಶಮುಖ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಇಷ್ಟಲ್ಲದೇ ಇಡಿ, ದೇಶ್ಮುಖ್ ಮತ್ತು ಅವರ ಎಲ್ಲಾ ಸಹಚರರು ಸೇರಿದಂತೆ ಚಾರ್ಟರ್ಡ್ ಅಕೌಂಟೆಂಟ್ಸ್ ಮೇಲೆ ಸರಣಿ ದಾಳಿ ನಡೆಸುವ ಮೂಲಕ ಮತ್ತು ಶೋಧ ನಡೆಸಿದೆ. ಮುಂಬೈನಲ್ಲಿರುವ ದೇಶಮುಖ್ ಅವರ ಸಹಾಯಕರ ವಿರುದ್ಧವೂ ಇದೇ ರೀತಿಯ ಕ್ರಮಗಳನ್ನು ಪ್ರಾರಂಭಿಸಲಾಗಿತ್ತು.