ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂಸ್
ಚೆನ್ನೈ : ನೆರೆಯ ರಾಜ್ಯದಲ್ಲಿ ಕರೋನವೈರಸ್ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕೇರಳದ ಗಡಿ ಚೆಕ್ ಪೋಸ್ಟ್ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದೇವೆ, ಎಂದು ತಮಿಳುನಾಡು ಸರ್ಕಾರ ಶನಿವಾರ ತಿಳಿಸಿದೆ.
ನೆರೆಯ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾದ ನಂತರ ತಮಿಳುನಾಡು ಆರೋಗ್ಯ ಇಲಾಖೆ ಕೇರಳದ ಗಡಿ ಚೆಕ್ ಪೋಸ್ಟ್ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ, ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.
ಶುಕ್ರವಾರ, ಕೇರಳದಲ್ಲಿ 17,518 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ಇದು 32,35,533ಕ್ಕೆ ತಲುಪಿದೆ ಮತ್ತು ಟೆಸ್ಟ್ ಪಾಸಿಟಿವಿಟಿ ರೇಟ್(ಟಿಪಿಆರ್) ಅಂದರೆ ಧನಾತ್ಮಕ ಪರೀಕ್ಷೆಯ ಶೇಕಡಾವಾರು 13ರ ಗಡಿ ದಾಟಿದೆ. ವೈರಸ್ಗೆ ಬಲಿಯಾದವರ ಪೈಕಿ, ಇಂದಿನ ಸಂಖ್ಯೆ 132 ಸಾವುಗಳು ದಾಖಲಾದ್ದು ಸೇರಿ, ಒಟ್ಟು ಸಂಖ್ಯೆ 15,871 ಕ್ಕೆ ಏರಿದೆ.
ಮೊದಲ ಅಲೆಯ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದ ಕರ್ನಾಟಕ ರಾಜ್ಯದಲ್ಲಿ, ಬಹುತೇಕ ಕೇರಳ ಹಾಗೂ ಮಹಾರಾಷ್ಟ್ರ ನೆರೆರಾಜ್ಯಗಳ ಕಾರಣ ಎದುರಾದ 2ನೇ ಅಲೆಯಿಂದ ವಿಫರಿತ ಸಾವುನೋವು ದಾಖಲಾಗಿತ್ತು. ಸಧ್ಯಕ್ಕೆ, ಯಶಸ್ವಿಯಾಗಿ 2ನೇ ಅಲೆಯಿಂದ ಯಶಸ್ವಿಯಾಗಿ ಹೊರಬಂದ ಕರ್ನಾಟಕ ರಾಜ್ಯಕ್ಕೆ ಮತ್ತೊಮ್ಮೆ ಕೇರಳ ಹಾಗೂ ಮಹಾರಾಷ್ಟ್ರ ನೆರೆರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದೆ ಹಾಗೂ ಕನ್ನಡದ ನೆಲದಲ್ಲಿ ಈಗ 3ನೇ ಅಲೆಗೆ ಕಾರಣವಾಗುವ ಸಂಕೇತ ನೀಡುತ್ತಿದೆ.