ಆರೋಗ್ಯ ಸಚಿವರ ವಜಾ ಮಾಡಿದ ತೆಲಂಗಾಣ ಸಿಎಂ ಕೆಸಿಆರ್ : ಅರೋಗ್ಯ ಖಾತೆ ಸಿಎಂ ವಶಕ್ಕೆ | ಜನತಾ ನ್ಯೂಸ್
ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಕ್ಷಣಕ್ಕೆ ಜಾರಿ ಬರುವಂತೆ ರಾಜ್ಯದ ಆರೋಗ್ಯ ಸಚಿವರನ್ನು ವಜಾ ಮಾಡಿದ್ದು, ಅವರ ಖಾತೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಎಂ ಕೆಸಿಆರ್ ಅವರ ಮನವಿಯನ್ನು ರಾಜ್ಯಪಾಲರು ಅಂಗೀಕರಿಸಿದ ನಂತರ ಇಟಾಲಾ ರಾಜೇಂದರ್ ಅವರ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಮುಖ್ಯಮಂತ್ರಿಯವರಿಗೆ ತಕ್ಷಣ ವರ್ಗಾಯಿಸಲಾಗಿದೆ.
ಮೇಡಕ್ ಜಿಲ್ಲೆಯಲ್ಲಿ ಇಟಾಲಾ ರಾಜೇಂದರ್ ಅವರ ವಿರುದ್ಧದ ಭೂ ಕಬಳಿಕೆ ಆರೋಪದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ ಕೆಸಿಆರ್ ಅವರು, ಮೇಡಕ್ನ ಮಸಾಯಿಪೆಟ್ ಮಂಡಲದಲ್ಲಿರುವ ಅಚಾಂಪೆಟ್ನ ಹೊರವಲಯದಲ್ಲಿರುವ ಭೂಮಿಯನ್ನು ಅತಿಕ್ರಮಣ ಮಾಡಿದ ದೂರುಗಳ ಕುರಿತು ಜಿಲ್ಲಾಧಿಕಾರಿಯಿಂದ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ರಾಜೇಂದರ್ ಅವರು ತಮ್ಮ ಕೋಳಿ ಫಾರ್ಮ್ ಜಮುನಾ ಹ್ಯಾಚರೀಸ್ ಸುತ್ತಮುತ್ತಲಿನ ಸುಮಾರು 100 ಎಕರೆ ನಿಯೋಜಿತ ಭೂಮಿಯನ್ನು ಕಸಿದುಕೊಂಡಿದ್ದಾರೆ, ಎಂದು ಕೆಲವು ರೈತರು ದೂರಿದ ಬೆನ್ನಲ್ಲೇ ಕೆಸಿಆರ್ ಅವರ ಈ ಕ್ರಮವು ಬಂದಿದೆ. ಕೆಲವು ಸ್ಥಳೀಯ ಟಿವಿ ಚಾನೆಲ್ಗಳು ಸಹ ಈ ಕುರಿತು ವರದಿಯನ್ನು ಮಾಡಿತ್ತು.