ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಬೆಡ್ ಬ್ಲಾಕ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈಗಾಗಲೇ ಹಲವಾರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಹಲವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತೆ.ಈ ಪ್ರಕರಣವನ್ನ ಸಮಗ್ರವಾಗಿ ತೆನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಡ್ ಬ್ಲಾಕ್ ದಂಧೆಯ ಬಗ್ಗೆ ಅಲ್ಲಿನ ಅವ್ಯವಹಾರ ಹಾಗೂ ಲೋಪಗಳನ್ನ ತೇಜಸ್ವಿ ಸೂರ್ಯ ಬೆಳಕಿಗೆ ತಂದಿದ್ದಾರೆ.ಅಲ್ಲಿನ ಲೋಪಗಳ ಬಗ್ಗೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಅವರ ಗಮನಕ್ಕೂ ವಿವರಣೆ ನೀಡಿದ್ದಾರೆ.
ಜಯನಗರ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಇದೀಗ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಸಿಸಿಬಿ ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿದ್ದಾರೆ. ಇದು ಒಂದೇ ವಲಯದಲ್ಲಿ ಮಾತ್ರ ಅಲ್ಲ. ಬಿಬಿಎಂಪಿ ಎಲ್ಲಾ ವಲಯದಲ್ಲಿ ಆಗಿರಬಹದುದು ಎಂದು ಹೇಳಿದ್ದಾರೆ.