ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂಸ್
ಬೆಂಗಳೂರು : ಬಹರೈನ್ ನಿಂದ ನವ ಮಂಗಳೂರು ಬಂದರಿಗೆ ಆಕ್ಸಿಜನ್ ಕಂಟೇನರ್ ಹೊತ್ತು ಆಗಮಿಸಿದ ಭಾರತೀಯ ನೌಕಾಪಡೆಯ ಐಏನ್ಎಸ್ ತಲ್ವಾರ್ ಯುದ್ಧನೌಕೆಯನ್ನು ಬರಮಾಡಿಕೊಳ್ಳಲಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹಂಚಿಕೆಯಾದ ಒಟ್ಟು 80 ಮೆ.ಟನ್ ಗಳ ಪೈಕಿ, 20 ಮೆಟ್ರಿಕ್ ಟನ್ ಸಾಮರ್ಥ್ಯದ ದ್ರವ ವೈದ್ಯಕೀಯ ಆಮ್ಲಜನಕದ 2 ಕಂಟೇನರ್(40ಮೆಟ್ರಿಕ್ ಟನ್)ಗಳನ್ನು ಹೊತ್ತುತಂದ ಐಏನ್ಎಸ್ ತಲ್ವಾರ್ ನ್ನು ಜಿಲ್ಲಾ ವಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದರಾದ ನಳಿನಕುಮಾರ್ ಕಟಿಲ್ ಹಾಗೂ ಶಾಸಕರು, ಜಿಲ್ಲಾಧಿಕಾರಿಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಇದಲ್ಲದೇ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್(ಐಒಸಿಎಲ್) ಮೂಲಕ 20 ಮೆಟ್ರಿಕ್ ಟನ್ ಸಾಮರ್ಥ್ಯದ ದ್ರವ ವೈದ್ಯಕೀಯ ಆಮ್ಲಜನಕದ 2 ಕಂಟೇನರ್(40ಮೆಟ್ರಿಕ್ ಟನ್)ಗಳನ್ನು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತಲಾ ಹಂಚಿಕೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ತುರ್ತು ಆಕ್ಸಿಜನ್ ಸರಬರಾಜು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದ ಇಂದು ಕೊಲ್ಲಿ ರಾಷ್ಟ್ರವಾದ ಬಹರೈನ್ ಭಾರತೀಯ ನೌಕಾಪಡೆಯ ಐಏನ್ಎಸ್ ತಲ್ವಾರ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡಿದೆ, ಎಂದು ಸಚಿವ ಶ್ರೀನಿವಾಸ್ ಪೂಜಾರಿ ಟ್ವೀಟ್ ಮಾಡಿದ್ದಾರೆ.
ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತಲಾ 20 ಮೆ.ಟನ್ ಸಾಮರ್ಥ್ಯದ 4 ಟ್ಯಾಂಕರ್ಗಳನ್ನು(80ಮೆಟ್ರಿಕ್ ಟನ್) ಹಂಚಿಕೆ ಮಾಡಿದೆ. ಆಸ್ಪತ್ರೆಗಳಿಗೆ ಆಮ್ಲಜನಕದ ಕೊನೆಯ ಮೈಲಿ ವಿತರಣೆಯಲ್ಲಿ ವ್ಯವಸ್ಥಾಪಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಡಚಣೆಗಳನ್ನು ತೆರವುಗೊಳಿಸಲು ಇದು ನಮಗೆ ಸಹಾಯ ಮಾಡುತ್ತದೆ, ಎಂದು ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ದೇಶದ ಸ್ಟೀಲ್ ಪ್ಲಾಂಟ್ಗಳು 2021ರ ಮೇ 4ರಂದು ಒಟ್ಟು 4076 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು(ಎಲ್ಎಂಒ) ಪೂರೈಸಿದೆ. ಹಾಗೂ ಏಪ್ರಿಲ್ ಮಧ್ಯದಲ್ಲಿ, ದಿನಕ್ಕೆ ಸರಾಸರಿ 1500-1700 ಮೆಟ್ರಿಕ್ ಟನ್ ಎಲ್ಎಂಒ ಗಳು ರವಾನೆಯಾಗಿವೆ ಎಂದು ಪಿಐಬಿ ಪ್ರಕಟಿಸಿದೆ.