ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂಸ್
ಬೆಂಗಳೂರು : ಮೊಟ್ಟಮೊದಲ ಭಾರಿಗೆ ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು 50ಸಾವಿರ ಗಡಿ ದಾಟಿದೆ, ಜನತಾ ಕರ್ಪ್ಯೂ ಯಾವುದೇ ಪರಿಣಾಮವಿಲ್ಲದಂತೆ ವಿಪರೀತವಾಗಿ ಹರಡುತ್ತಿದೆ. ರಾಜ್ಯಾದ್ಯಂತ ಇಂದು 50112 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಅರ್ಧದಷ್ಟು ಪಾಲು ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆ 23,106 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1033 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಹಾಗೆಯೆ, ಪ್ರಕರಣಗಳ ಸಂಖ್ಯೆ ಶತಕ ದಾಟಿದ ಜಿಲ್ಲೆಗಳೆಂದರೆ ಕುಲಬುರಗಿಯಲ್ಲಿ 1097, ಮೈಸೂರು ನಲ್ಲಿ 2790, ಬೀದರ್ ನಲ್ಲಿ 482, ದಕ್ಷಿಣ ಕನ್ನಡದಲ್ಲಿ 1529, ಹಾಸನದಲ್ಲಿ 1604, ತುಮಕೂರುನಲ್ಲಿ 2335, ಬಳ್ಳಾರಿ 927, ಮಂಡ್ಯದಲ್ಲಿ 1621, ಧಾರವಾಡದಲ್ಲಿ 1030, ವಿಜಯಪುರದಲ್ಲಿ 513, ಶಿವಮೊಗ್ಗದಲ್ಲಿ 702, ಬೆಳಗಾವಿಯಲ್ಲಿ 920, ಚಿಕ್ಕಬಳ್ಳಾಪುರದಲ್ಲಿ 830, ದಾವಣಗೆರೆಯಲ್ಲಿ 548, ಕೋಲಾರದಲ್ಲಿ 1115, ಚಾಮರಾಜನಗರದಲ್ಲಿ 542, ಕೊಡಗುನಲ್ಲಿ 768, ಕೊಪ್ಪಳದಲ್ಲಿ 182, ಉಡುಪಿಯಲ್ಲಿ 1655, ರಾಮನಗರದಲ್ಲಿ 475 ಹಾಗೂ ಉತ್ತರ ಕನ್ನಡ 849 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 17,41,046ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 346 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 11,343 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 26,841 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 12,10,013 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ದಾಖಲಾದ 346 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 161 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 16,884 ಆಗಿದೆ.