ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಅನುಮಾನಾಸ್ಪಾದ ಸಾವು | ಜನತಾ ನ್ಯೂಸ್
ಮೈಸೂರು : ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ನಿಗೂಢ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಾಂಪುರ ಎಸ್. ಬಿ.ಎಂ ಕಾಲೋನಿಯಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಸರಗೂರು ಗ್ರಾಮದ ಆಶಾರಾಣಿ (28) ಮೃತ ದುರ್ದೈವಿ.
ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದವರಾದ ಈಕೆಯನ್ನ ಒಂದು ತಿಂಗಳ ಹಿಂದಷ್ಟೇ ಟೆಕ್ಕಿ ಪ್ರದೀಪ್ ಎಂಬಾತನ ಜೊತೆ ವಿವಾಹ ಮಾಡಲಾಗಿತ್ತು.
ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ನಗದು, 130 ಗ್ರಾಂ ಚಿನ್ನ ವರದಕ್ಷಿಣೆ ನೀಡಲಾಗಿತ್ತು ಎನ್ನಲಾಗಿದೆ. ಮತ್ತಷ್ಟು ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿ ಆಶಾರಾಣಿಯನ್ನು ಕೊಲೆ ಮಾಡಲಾಗಿದೆ ಎಂದು ಮೃತ ಆಶಾರಾಣಿ ಪೋಷಕರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರದೀಪ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
English summary :Mysuru