ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂಸ್
ಯಾದಗಿರಿ : ಶಿವಕುಮಾರ ಎಂಬಾತ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಮೇ 6 ರಂದು ಮದುವೆಯಾಗುವುದಾಗಿ ಬಾಲಕಿಯನ್ನು ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಪೋಷಕರು ಹುಡುಕಾಟ ನಡೆಸಿದ್ದಾರೆ.
ಶಿವಕುಮಾರ್ ಬಾಚಮಟ್ಟಿ ಎಂಬಾತ ಹುಣಸಗಿ ಪಟ್ಟಣದ ಅಪ್ತಾಪ್ತ ಬಾಲಕಿಯನ್ನ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನ ಯಂಕಂಚಿ ಲಾಡ್ಜ್ ಗೆ ಮೇ 6ರಂದು ಕಾರಿನಲ್ಲಿ ಕರೆದೊಯ್ದಿದ್ದ.
ಇದಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದರು. ಸಿಂದಗಿ ತಾಲೂಕಿನ ಯಂಕಂಚಿಯ ಲಾಡ್ಜ್ನಲ್ಲಿ ಇಬ್ಬರೂ ತಂಗಿದ್ದರು.
ನಂತರ ಲಾಡ್ಜ್ ಗೆ ಬಂದಿದ್ದ ಯುವಕನ ಸ್ನೇಹಿತ ಬಸವನಗೌಡ ನಿಮ್ಮನ್ನು ಮನೆಯವರು ಹುಡುಕುತ್ತಿದ್ದು, ಅವರ ಕೈಗೆ ಸಿಕ್ಕರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಊರಿಗೆ ಬರಬೇಡಿ, ಎಲ್ಲಾದರೂ ವಿಷ ಕುಡಿದು ಸಾಯಿರಿ ಎಂದು ಹೇಳಿದ್ದಾನೆ.
ಇದರಿಂದ ನೊಂದ ಯುವಕ ಮತ್ತು ಬಾಲಕಿ ವಿಷ ಕುಡಿದಿದ್ದಾರೆ. ಪೋಷಕರು ಹುಡುಕಾಡಿಕೊಂಡು ಲಾಡ್ಜ್ ಗೆ ಬಂದಾಗ ವಿಷಸೇವಿಸಿ ಒದ್ದಾಡುತ್ತಿದ್ದ ಬಾಲಕಿ ಮತ್ತು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇತ್ತ ಮೃತ ಬಾಲಕಿಯ ಪೋಷಕರು ಯುವಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಷ ಕುಡಿದವರನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಬಾಲಕಿ ಅಂದು ಏನೆಲ್ಲ ಆಯ್ತು ಎಂಬುದನ್ನು ಪಾಲಕರ ಬಳಿ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.
ಮದುವೆ ಆಗುವುದಾಗಿ ನನ್ನನ್ನು ನಂಬಿಸಿದ ಶಿವಕುಮಾರ್ ಕಾರಿನಲ್ಲಿ ಲಾಡ್ಜ್ಗೆ ಕರೆದೊಯ್ದ. ನಾನು ಬೇಡ ಬೇಡ ಅಂದರೂ ಲೈಂಗಿಕ ಸಂಭೋಗ ನಡೆಸಿದ. ಇದಾದ ಮೇಲೆ ಬಸನಗೌಡ ಎಂಬಾದ ಬಂದು, ನಿಮ್ಮನ್ನು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ಒಟ್ಟಿಗೆ ಇರಲು ಬಿಡಲ್ಲ. ಎಲ್ಲಾದರೂ ವಿಷ ಕುಡಿದು ಸಾಯಿರಿ. ಆದರೆ ಊರಿಗೆ ಮಾತ್ರ ಬರಬೇಡಿ ಅಂದ. ಅದಕ್ಕೆ ನಾವು ವಿಷ ಕುಡಿದೆವು.. ಎಂದು ಸಾವಿಗೂ ಮುನ್ನ ಬಾಲಕಿ ಹೇಳಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.