ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂಸ್
ನವದೆಹಲಿ : ಕುಟುಂಬ ಆಧಾರಿತ ಪಕ್ಷ ಸಂವಿದಾನದ ವಿರುದ್ಧವಾಗಿದೆ, ಎಂದು ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಸಂವಿದಾನ ದಿನದ ಕುರಿತು ತಮ್ಮ ಭಾಷಣದಲ್ಲಿ ಮಾತನಾಡುತ್ತಿದ್ದರು.
ರಾಜನೀತಿಯ ದಳ ಪಾರ್ಟಿ ಫಾರ ದಿ ಫ್ಯಾಮಿಲಿ(ಕುಟುಂಬಕ್ಕಾಗಿ ಪಕ್ಷ), ಪಾರ್ಟಿ ಬೈ ಫ್ಯಾಮಿಲಿ(ಕುಟುಂಬದಿಂದ ಪಕ್ಷ)... ಇದರ ಮುಂದೆ ನನಗೆ ಏನು ಹೇಳುವ ಅಗತ್ಯವಿಲ್ಲ. ಕಾಶ್ಮೀರಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಯಾವುದೇ ರಾಜನೀತಿಯ ಪಕ್ಷವನ್ನು ನೋಡಿ ಇದು ಲೋಕ ತಂತ್ರದ ಭಾವನೆಯ ವಿರುದ್ಧವಾಗಿದೆ.
ಇದು, ಸಂವಿಧಾನ ನಮಗೆ ಏನು ಹೇಳುತ್ತದೆ, ಅದರ ವಿರುದ್ಧವಾಗಿದೆ. ಮತ್ತು ಯಾವಾಗ ನಾನು ಪಾರಿವಾರಿಕ ಪಾರ್ಟಿ ಎಂದು ಹೇಳುತ್ತೇನೆ, ಅದರ ಅರ್ಥ ಒಂದು ಪರಿವಾರದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರು ರಾಜಕೀಯಕ್ಕೆ ಬರಬಾರದು ಎಂದು ಅರ್ಥವಲ್ಲ, ಅಲ್ಲವೇ ಅಲ್ಲ.
ಯೋಗ್ಯತೆಯ ಆಧಾರದ ಮೇಲೆ, ಜನರ ಆಶೀರ್ವಾದದಿಂದ ಒಂದು ಕುಟುಂಬದಿಂದ ಒಂದಕ್ಕೂ ಅಧಿಕ ಜನರು ರಾಜನೀತಿಗೆ ಬರಲಿ. ಇದರಿಂದ ಆ ಪಕ್ಷ ಒಂದು ಪರಿವಾರಕ್ಕೆ ಸೇರಿ ಬಿಡುವುದಿಲ್ಲ. ಆದರೆ, ಕೆಲವೊಂದು ಪಕ್ಷಗಳನ್ನು ಪೀಳಿಗೆಯಿಂದ-ಪೀಳಿಗೆಗೆ ಒಂದೇ ಕುಟುಂಬ ನಡೆಸುತ್ತಿದ್ದರೆ, ಪಾರ್ಟಿಯ ಎಲ್ಲಾ ವ್ಯವಸ್ಥೆ ಒಂದೇ ಕುಟುಂಬದ ಕೈಯಲ್ಲಿದ್ದರೆ, ಅದು ಲೋಕ ತಂತ್ರದ ಅವಸ್ಥೆಗೆ ಸಂಕಟ ವಾಗಿರುತ್ತದೆ, ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
ಸಂವಿಧಾನದ ದಿನವಾದ ಇಂದು ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಮುಂಬೈ ಭಯೋತ್ಪಾದಕ ದಾಳಿಯನ್ನು ಸ್ಮರಿಸಿದ್ದು, ಇಂದು ನಮಗೆ ಒಂದು ದುಃಖಕರ ದಿನ ಇದೇ ದಿನದಂದು ನಮ್ಮ ದೇಶದ ಶತ್ರುಗಳು ನಮ್ಮ ದೇಶದ ಒಳಗಡೆ ಬಂದು ಭಯೋತ್ಪಾದಕ ಚಟುವಟಿಕೆ ನಡೆಸಿದ್ದರು. ಅಂದು ಭಯೋತ್ಪಾದಕರೊಂದಿಗೆ ಹೋರಾಡುತ್ತಾ ತಮ್ಮ ಸರ್ವೋಚ್ಚ ಬಲಿದಾನ ನೀಡಿದ ನಮ್ಮ ಯೋಧರನ್ನು ನಾನು ಇಂದು ನಮ್ಮ ನಮಿಸುತ್ತೇನೆ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ತಮ್ಮ ಪುಸ್ತಕದಲ್ಲಿ 26/11ರ ಕರಾಳ ದಿನದ ಬಗ್ಗೆ ಪ್ರಸ್ತಾಪಿಸಿ ಮುಂಬೈ ದಾಳಿಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಅಂದಿನ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಸರಿಯಾದ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾಯಿತು, ಎಂದು ಟಿಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.