ಚುಚ್ಚುಮದ್ದಿನಿಂದ ಮಕ್ಕಳ ಸಾವು ಪ್ರಕರಣ: ನರ್ಸ್, ಫಾರ್ಮಸಿಸ್ಟ್ ಅಮಾನತು | ಜನತಾ ನ್ಯೂಸ್
ಬೆಳಗಾವಿ : ಬೆಳಗಾವಿಯಲ್ಲಿ ರೂಬೆಲ್ಲಾ ಚುಚ್ಚುಮದ್ದಿನಿಂದ ಮೂರು ಮಕ್ಕಳ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಎನ್ಎಂ ಮತ್ತು ಫಾರ್ಮಾಸಿಸ್ಟ್ರನ್ನು ತಕ್ಷಣ ಅಮಾನತು ಮಾಡಲು ಸೂಚನೆ ನೀಡಲಾಗಿದೆ.
13 ತಿಂಗಳ ಪವಿತ್ರಾ, 14 ತಿಂಗಳ ಮಧು ಉಮೇಶ್ ಕುರಗುಂದಿ ಹಾಗೂ ಒಂದೂವರ ವರ್ಷದ ಚೇತನ ಪೂಜಾರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಂಬಂಧ ಆದೇಶ ಹೊರಡಿಸಿರುವಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ ಅವರು, ಬಿಮ್ಸ್ ಆಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದಂತ ಮೂರು ಕಂದಮ್ಮಗಳ ಸಾವಿನ ಪ್ರಕರಣದಲ್ಲಿ ನರ್ಸ್ ಸಲೀಮಾ ಮಹಾತ್, ಫಾರ್ಮಸಿಸ್ಟ್ ಜಯರಾಜ್ ಕುಂಬಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
RELATED TOPICS:
English summary :Belagavi