ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂಸ್
ಬೆಂಗಳೂರು : ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ 79 ದಿನಗಳ ಬಳಿಕ ಗುಜರಾತಿನ ಆಶ್ರಮವೊಂದರಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್ನ ಸೂರತ್ ಆಶ್ರಮವೊಂದರಲ್ಲಿ ತಂಗಿದ್ದ ಬಾಲಕಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣ ಹಾಗೂ ಪೊಲೀಸರ ತನಿಖೆಯಿಂದ ಅ.31ಕ್ಕೆ ಕಣ್ಮರೆಯಾದ ಬಾಲಕಿ ಜ.15ಕ್ಕೆ ಗುಜರಾತಿನ ಸೂರತ್ನಲ್ಲಿನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಕರೆತಂದು ಮಕ್ಕಳ ಕೇರ್ ಸೆಂಟರ್ಗೆ ನೀಡಲಾಗಿತ್ತು.
15ರ ಬಾಲೆಯ ನಾಪತ್ತೆಗೆ ಆಕೆಯ ಮೇಲೆ ಬಲವಾದ ಒತ್ತಡ, ಪ್ರಚೋದನೆ ಇರಬಹುದು ಎನ್ನಲಾಗಿತ್ತು. ಆಕೆ ಆತ್ಮಗಳ ವಿಚಾರದ ಬಗ್ಗೆ ತಿಳಿದಿದ್ದೇ ಇದಕ್ಕೆ ಕಾರಣವೆಂಬ ಸಂಶಯ ಉಂಟಾಗಿತ್ತು.
ಆದರೆ, ಯುವತಿಗೂ ಮತ್ತು ಪೋಷಕರ ನಡುವೆ ಶಾಲೆಗೆ ಸಂಬಂಧಿಸಿದಂತೆ ಅಸಮಾಧಾನ ಉಂಟಾಗಿತ್ತು.ತನ್ನನ್ನು ಬೇರೆ ಶಾಲೆಗೆ ಸೇರಿಸುವಂತೆ ಹೇಳಿದರೂ ತಂದೆ ಸೇರಿಸಿರಲಿಲ್ಲ. ಇದೇ ಬೇಸರದಿಂದಲೇ ಮನೆಯಿಂದ 2,500 ಸಾವಿರ ರೂ. ಎರಡು ಜೊತೆ ಬಟ್ಟೆ ತೆಗೆದುಕೊಂಡು ಕಣ್ಮರೆಯಾಗಿದ್ದಳು. ತಾನು ಮನೆ ಬಿಡಲು ಶಾಲೆಯ ವಿಚಾರದಲ್ಲಿ ನನ್ನ ತಂದೆ ತಾಯಿ ಜೊತೆ ನಡೆದ ವಾಗ್ವಾದ ಕಾರಣ ಎಂದಿದ್ದಾಳೆ.