ಕನ್ನಡ / English

ಮಹಿಳೆಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ಸೋಮಣ್ಣ | JANATA NEWS

23 Oct 2022
8474

ಚಾಮರಾಜನಗರ : ಮಹಿಳೆಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ.

45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ ಎಂದು ಹೇಳಿದರು.

ನಿನ್ನೆ ನಡೆದ ಘಟನೆ ಘಟನೆಯೇ ಅಲ್ಲ. ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರ್ತಾ ಇದ್ದಳು, ತಾಯಿ ಎಷ್ಟು ಸಾರಿ ಬರ್ತೀಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಅಷ್ಟೇ ವಿನಃ ನನಗೆ ಆಕೆಯನ್ನು ಹೊಡೆಯಬೇಕು ಎನ್ನುವ ಉದ್ದೇಶ ಇರಲಿಲ್ಲ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಮಹಿಳೆಗೆ ಒತ್ತಡ ಹೇರಿ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಅದರ ಅವಶ್ಯಕತೆ ನನಗೆ ಇಲ್ಲ. ಆ ರೀತಿ ಜೀವನ ಮಾಡಿಲ್ಲ. ಈ ಸೋಮಣ್ಣ ಯಾವತ್ತು ಕ್ಷುಲ್ಲಕ ಕೆಲಸ ಮಾಡಿಲ್ಲ. ಸೋಮಣ್ಣ ಸೋಮಣ್ಣ ಆಗಿಯೇ ಇದ್ದೇನೆ ಎಂದರು.

ಸಂಸ್ಕಾರಯುತವಾಗಿ ಜೀವನ ಮಾಡಿದ್ದೇನೆ. ನನಗೆ ಹೆಣ್ಣು ಮಕ್ಕಳು ತಾಯಿಂದಿರ ಸಮಾನ. ಇಷ್ಟೊಂದು ಜನ ನನ್ನ ಕಾರ್ಯ ವೈಖರಿಯನ್ನು ವಿರೋಧಿಸ್ತಾರೆ ಅಂತ ದೇವರಾಣೆಗೂ ಗೊತ್ತಿರಲಿಲ್ಲ. ನನ್ನ ಪತ್ನಿ ಬಿಟ್ಟರೆ ಉಳಿದ ಹೆಣ್ಣು ಮಕ್ಕಳೆಲ್ಲಾ ಸಹೋದರಿಯರು, ತಾಯಿಂದಿರ ಸಮಾನ. ನನ್ನಿಂದ ಯಾರಿಗಾದರು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೀನಿ ಎಂದು ಎರಡೆರಡು ಬಾರಿ ಸಚಿವರು ಕ್ಷಮೆ ಕೇಳಿದ್ದಾರೆ.

RELATED TOPICS:
English summary :Woman slapped case: Somanna apologizes

ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ : ಲಂಚವನ್ನು ಸಮರ್ಥಿಸಿದರಾ ಸಚಿವ ಶಿವಲಿಂಗೇಗೌಡ?
ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ : ಲಂಚವನ್ನು ಸಮರ್ಥಿಸಿದರಾ ಸಚಿವ ಶಿವಲಿಂಗೇಗೌಡ?
..ಏಯ್ ಧನಂಜಯ್.. ಬಾರೋ ಲೇ - ಟಿ.ನರಸೀಪುರ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯಲ್ಲಿ ಗುಡುಗಿದ ಪ್ರತಾಪ್ ಸಿಂಹ
..ಏಯ್ ಧನಂಜಯ್.. ಬಾರೋ ಲೇ - ಟಿ.ನರಸೀಪುರ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯಲ್ಲಿ ಗುಡುಗಿದ ಪ್ರತಾಪ್ ಸಿಂಹ
ಹೊಸ ಯುಪಿಐ ನೀತಿಯನ್ನು ಬೆಂಬಲಿಸಿದ ಒಮರ್ ಅಬ್ದುಲ್ಲಾ ; ಉಚಿತವಾಗಿ ಪಡೆಯುವುದನ್ನು ಸರಿಯಾಗಿ ಪ್ರಶಂಸಿಸುವುದಿಲ್ಲ
ಹೊಸ ಯುಪಿಐ ನೀತಿಯನ್ನು ಬೆಂಬಲಿಸಿದ ಒಮರ್ ಅಬ್ದುಲ್ಲಾ ; ಉಚಿತವಾಗಿ ಪಡೆಯುವುದನ್ನು ಸರಿಯಾಗಿ ಪ್ರಶಂಸಿಸುವುದಿಲ್ಲ
ಭಾರತದಾದ್ಯಂತ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ; ಉತ್ಪಾದನೆ ಪ್ರಾರಂಭಿಸಿದ ಇನ್ನೂ 2 ಸೆಮಿಕಂಡಕ್ಟರ್ ಸ್ಥಾವರಗಳು
ಭಾರತದಾದ್ಯಂತ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ; ಉತ್ಪಾದನೆ ಪ್ರಾರಂಭಿಸಿದ ಇನ್ನೂ 2 ಸೆಮಿಕಂಡಕ್ಟರ್ ಸ್ಥಾವರಗಳು
 ಭಾರತವು ಅಮೆರಿಕ ಕಾಂಗ್ರೆಸ್ ನಿರ್ಬಂಧ ಮಸೂದೆಗೆ ಪ್ರತಿಕ್ರಿಯಿಸಿ, ಇಂಧನ ಭದ್ರತಾ ಬದ್ಧತೆಯನ್ನು ಪುನರುಚ್ಚರಿಸಿದ
ಭಾರತವು ಅಮೆರಿಕ ಕಾಂಗ್ರೆಸ್ ನಿರ್ಬಂಧ ಮಸೂದೆಗೆ ಪ್ರತಿಕ್ರಿಯಿಸಿ, ಇಂಧನ ಭದ್ರತಾ ಬದ್ಧತೆಯನ್ನು ಪುನರುಚ್ಚರಿಸಿದ
ರಷ್ಯಾ-ಇರಾನ್ ನಿರ್ಬಂಧ ಮಸೂದೆ ಅಂಗೀಕರಿಸಿದ ಅಮೆರಿಕ ಸಂಸತ್ತು : ಭಾರತ ಸೇರಿದಂತೆ ಇತರರಿಗೆ 100% ಸುಂಕ ಬೆದರಿಕೆ
ರಷ್ಯಾ-ಇರಾನ್ ನಿರ್ಬಂಧ ಮಸೂದೆ ಅಂಗೀಕರಿಸಿದ ಅಮೆರಿಕ ಸಂಸತ್ತು : ಭಾರತ ಸೇರಿದಂತೆ ಇತರರಿಗೆ 100% ಸುಂಕ ಬೆದರಿಕೆ
ಕನ್ನಡಕ್ಕೆ ಹೆಮ್ಮೆಯ ಕ್ಷಣ: ಅನಂತ್ ನಾಗ್ ಅವರಿಗೆ 2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಕನ್ನಡಕ್ಕೆ ಹೆಮ್ಮೆಯ ಕ್ಷಣ: ಅನಂತ್ ನಾಗ್ ಅವರಿಗೆ 2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಮಕ್ಕಾ ಬಳಿ ಡ್ರೋನ್ ದಾಳಿಯನ್ನು ಖಂಡಿಸಿ, ಪ್ರಾದೇಶಿಕ ಶಾಂತಿಗೆ ಕರೆ ನೀಡಿದ ಭಾರತ
ಮಕ್ಕಾ ಬಳಿ ಡ್ರೋನ್ ದಾಳಿಯನ್ನು ಖಂಡಿಸಿ, ಪ್ರಾದೇಶಿಕ ಶಾಂತಿಗೆ ಕರೆ ನೀಡಿದ ಭಾರತ
ಕಠಿಣ ಶಿಕ್ಷೆಗೆ ಆಗ್ರಹಿಸಿದ ದಿಶಾ ಸಾಲಿಯಾನ್ ಳ ತಂದೆ ; ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ - ಸತೀಶ್ ಸಾಲಿಯಾನ್
ಕಠಿಣ ಶಿಕ್ಷೆಗೆ ಆಗ್ರಹಿಸಿದ ದಿಶಾ ಸಾಲಿಯಾನ್ ಳ ತಂದೆ ; ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ - ಸತೀಶ್ ಸಾಲಿಯಾನ್
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಗೃಹಪ್ರವೇಶ ಕಾರ್ಯಕ್ರಮ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಗೃಹಪ್ರವೇಶ ಕಾರ್ಯಕ್ರಮ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
 ಬ್ರಿಕ್ಸ್ ಶೃಂಗಸಭೆ 2026 ರ ತೀರ್ಮಾನ : ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ ಜೈಶಂಕರ್
ಬ್ರಿಕ್ಸ್ ಶೃಂಗಸಭೆ 2026 ರ ತೀರ್ಮಾನ : ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ ಜೈಶಂಕರ್
ರಾಜತಾಂತ್ರಿಕ ಸಂಗಮವಾದ ದೆಹಲಿ : ಬ್ರಿಕ್ಸ್ ಶೃಂಗಸಭೆಯಲ್ಲಿ ಇರಾನಿನ ಅಧ್ಯಕ್ಷರನ್ನು ಭೇಟಿಯಾದ ಯುಎಇ ಕ್ರೌನ್ ಪ್ರಿನ್ಸ್
ರಾಜತಾಂತ್ರಿಕ ಸಂಗಮವಾದ ದೆಹಲಿ : ಬ್ರಿಕ್ಸ್ ಶೃಂಗಸಭೆಯಲ್ಲಿ ಇರಾನಿನ ಅಧ್ಯಕ್ಷರನ್ನು ಭೇಟಿಯಾದ ಯುಎಇ ಕ್ರೌನ್ ಪ್ರಿನ್ಸ್

ನ್ಯೂಸ್ MORE NEWS...