ಅರಣ್ಯ ಸಚಿವರ ನಿವಾಸದ ಬಳಿ ಬಂದ ಮೊಸಳೆ ಸೆರೆ! | Janata news
![](2020/November/Jimg/1605077098.jpg)
ಬಳ್ಳಾರಿ: : ಅರಣ್ಯ ಸಚಿವ ಆನಂದ್ ಸಿಂಗ್ರನ್ನು ಭೇಟಿಯಾಗಲು ಬಂದ ಮೊಸಳೆಯೊಂದು ಸೆರೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆಯಲ್ಲಿರುವ ಆನಂದ ಸಿಂಗ್ ಅವರ ಬೃಹತ್ ಬಂಗಲೆ ಮುಂದೆಯೇ ಮೊಸಳೆ ಪ್ರತ್ಯಕ್ಷವಾಗಿದೆ.
ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಬೈಪಾಸ್ ಬಳಿ ಎಲ್ಎಲ್ಸಿ ಕಾಲುವೆ ಇದೆ. ನಿನ್ನೆ ರಾತ್ರಿ ಕಾಲುವೆಯಿಂದ ಮೊಸಳೆಯು ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿತ್ತು.
ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಸೆರೆ ಹಿಡಿದು, ಝೂಲಾಜಿಕಲ್ ಪಾರ್ಕ್ಗೆ ಕೊಂಡೊಯ್ದಿದ್ದಾರೆ.
RELATED TOPICS:
English summary :Ballari