ಮೊನಟೈಸೆಶನ್ ಎಂದರೇನು ಎಂದು ರಾಹುಲ್ ಗಾಂಧಿಗೆ ಅರ್ಥವಾಗುತ್ತದೆಯೇ? - ಕೇಂದ್ರ ಹಣಕಾಸು ಸಚಿವೆ | ಜನತಾ ನ್ಯೂಸ್
ನವದೆಹಲಿ : ಕೇಂದ್ರ ಸರ್ಕಾರದ 6 ಲಕ್ಷ ಕೋಟಿ ಹಣಗಳಿಸುವ ಯೋಜನೆಯನ್ನು ಟೀಕಿಸುವ ಕಾಂಗ್ರೆಸ್ ಮಾಜಿ ರಾಷ್ಟೀಯಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಂತಹ ಕ್ರಮವೆಂದರೆ ಏನು ಎಂದು ಅರ್ಥವಾಗುತ್ತದೆಯೇ?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್, ಭೂಮಿ ಮತ್ತು ಗಣಿಗಳಂತಹ ಸಂಪನ್ಮೂಲಗಳನ್ನು ಮಾರಾಟ ಮಾಡುವ ಮೂಲಕ ಕಾಂಗ್ರೆಸ್ ಕಿಕ್ ಬ್ಯಾಕ್ ಪಡೆಯುತಿತ್ತು, ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್-ನೇತೃತ್ವದ ಸರ್ಕಾರಗಳು, ಮುಂಬೈ-ಪುಣೆ ಎಕ್ಸ್ಪ್ರೆಸ್ವೇ ಯನ್ನು ಹಣಗಳಿಸುವ ಮೂಲಕ 8,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದವು ಮತ್ತು 2008ರಲ್ಲಿ ಯುಪಿಎ ಸರ್ಕಾರವೇ ಹೊಸದಿಲ್ಲಿ ರೈಲ್ವೇ ನಿಲ್ದಾಣವನ್ನು ಗುತ್ತಿಗೆಗೆ ನೀಡುವಂತೆ ಮನವಿ ಮಾಡಿತ್ತು.
ಯುಪಿಎ ಸರ್ಕಾರದ ಕಾಲಾವಧಿಯಲ್ಲಿ, ರಾಹುಲ್ ಗಾಂಧಿ ತಾವು ಒಪ್ಪದ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ ಘಟನೆಯನ್ನು ನೆನಪಿಸಿಕೊಂಡ ಕೇಂದ್ರ ಸಚಿವರು, ಅವರು(ರಾಹುಲ್) ಆರ್ಎಫ್ಪಿಯನ್ನು ಏಕೆ ಹರಿದು ಹಾಕಲಿಲ್ಲ?, ಎಂದು ಪ್ರಶ್ನಿಸಿದ್ದಾರೆ.
"ಅವರು ನಿಜವಾಗಿಯೂ ಹಣಗಳಿಕೆಗೆ ವಿರುದ್ಧವಾಗಿದ್ದರೆ, ಎನ್ಡಿಎಲ್ಎಸ್ ನ ನಗದೀಕರಣದ ಮೇಲೆ ಆರ್ಎಫ್ಪಿ ಯನ್ನು ರಾಹುಲ್ ಗಾಂಧಿ ಏಕೆ ಹರಿದು ಹಾಕಿಲ್ಲ? ಮತ್ತು ಒಂದೊಮ್ಮೆ ಅದು ಹಣಗಳಿಕೆಯಾಗಿದ್ದರೆ, ಅವರು ಹೊಸದಿಲ್ಲಿಯ ರೈಲ್ವೇ ನಿಲ್ದಾಣವನ್ನು ಮಾರಾಟ ಮಾಡಿದ್ದಾರೆಯೇ? ಇದು ಈಗ ಜಿಜಾಜಿ (ಸೋದರ ಮಾವ) ಒಡೆತನದಲ್ಲಿದೆಯೇ?, ಎಂದು ಪ್ರಶ್ನಿಸಿದ್ದಾರೆ. ಹಣಗಳಿಕೆ(ಮೊನಟೈಸೆಶನ್) ಎಂದರೇನು ಎಂದು ಅವನಿಗೆ ಅರ್ಥವಾಗುತ್ತಿದೆಯೇ?, ಎಂದು ಲೇವಡಿ ಮಾಡಿ ಪ್ರಶ್ನಿಸಿದ್ದಾರೆ.