ಅಫ್ಘಾನಿಸ್ತಾನವನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ನೋಡುವುದು ನಮ್ಮ ಗುರಿ - ಭಾರತ | ಜನತಾ ನ್ಯೂಸ್
ನವದೆಹಲಿ : ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಆಗಬಾರದು ಎಂಬುದು ನಮ್ಮ ಗುರಿ, ಎಂದು ಭಾರತ ಸರ್ಕಾರ ಸಂದೇಶ ರವಾನಿಸಿದೆ.
ಇಂದು ಗುರುವಾರ ವಿದೇಶಾಂಗ ಸಚಿವಾಲಯದ ನಡೆಸಿದ ಸುದ್ಧಿಘೋಷ್ಠಿಯಲ್ಲಿ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡುತ್ತಿದ್ದರು.
ಅಫ್ಘಾನಿಸ್ತಾನದಲ್ಲಿ ಯಾವ ರೀತಿಯ ಸರ್ಕಾರವನ್ನು ರಚಿಸಬಹುದು ಎಂಬ ಯಾವುದೇ ಸ್ವಭಾವದ ಬಗ್ಗೆ ಅಥವಾ ವಿವರ ನಮಗೆ ತಿಳಿದಿಲ್ಲ. ನಮ್ಮ ಸಭೆಯ(ತಾಲಿಬಾನ್ ಜೊತೆ) ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಎಂದು ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಇದು(ತಾಲಿಬಾನ್ ಜೊತೆಗಿನ ಮುಂದಿನ ಸಭೆಗಳ ಮಾರ್ಗಸೂಚಿಯ ಬಗ್ಗೆ) ಆಗುತ್ತೋ ಅಥವಾ ಇಲ್ಲ ಎಂಬುದು ವಿಷಯವಲ್ಲ. ನಮ್ಮ ಗುರಿ ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು, ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಬಾಗ್ಚಿ ಅವರು, ಭಾರತಕ್ಕೆ ಬರಲು ಇಚ್ಚಿಸಿದವರನ್ನು ಈಗಾಗಲೇ ಕರೆತರಲಾಗಿದೆ. ಆದರೆ, ಇನ್ನೂ ಹಲವರು ಉಳಿದಿರಬಹುದು.
ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿಲ್ಲ. ವಿಮಾನ ನಿಲ್ದಾಣದ ಸೇವೆ ಪುನರಾರಂಭವಾದ ಬಳಿಕ, ಕಾಬೂಲ್ನಿಂದ ಜನರನ್ನು ಸ್ಥಳಾಂತರಿಸುವ ನಮ್ಮ ಕಾರ್ಯಾಚರಣೆಯನ್ನು ನಾವು ಪುನರಾರಂಭಿಸುತ್ತೇವೆ, ಎಂದು ತಿಳಿಸಿದ್ದಾರೆ.