ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂಸ್
ಹಾಸನ : ಆಸ್ತಿಯಲ್ಲಿ ಪಾಲು ನೀಡಬೇಕಾಗುವುದೆಂದು ಅಣ್ಣನೇ ತಮ್ಮನ ಕತ್ತು ಸೀಳಿ ಕೊಂದಿರುವ ಅಮಾನವೀಯ ಘಟನೆ ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.. ಕೊಲೆ ನಡೆದ 24 ಗಂಟೆಯೊಳಗೆ ಆರೋಪಿಯನ್ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮಹೇಶ್ (34) ಬಂಧಿತ ಆರೋಪಿ. ಜಲೇಂದ್ರ (31) ಕೊಲೆಯಾಗಿದ್ದ ವ್ಯಕ್ತಿ. ತಮ್ಮನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ತಲೆಗೆ ಹೊಡೆದು, ನಂತರ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ 30 ವರ್ಷದ ಜಲೇಂದ್ರನ ಶವ ಸಿಕ್ಕಿತ್ತು. ಪೊಲೀಸರು ಶ್ವಾನದಳ ಮತ್ತು ಫೊರೆನ್ಸಿಕ್ ಸಿಬ್ಬಂದಿಯ ಸಹಾಯದಿಂದ ತನಿಖೆ ನಡೆಸಿದ್ದರು.
ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
English summary :Hasan