ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂಸ್
ಮೈಸೂರು : ದೇಗುಲ ತೆರವು ವಿಚಾರ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು. ನೀವು ವಕೀಲರಾಗಿದ್ದೀರಿ, ಏಕೆ ನೀವು ಗಮನಹರಿಸಲಿಲ್ಲ..? ಎಂದು ಸಿದ್ಧರಾಮಯ್ಯಗೆ
ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರೇ ನಿಮಗೆ ಈಗ ದೇವಸ್ಥಾನಗಳ ಮೇಲೆ ಪ್ರೀತಿ, ಕಾಳಜಿ ಏಕೆ ಬಂತು ಎಂಬುದು ಗೊತ್ತಾಗುತ್ತಿಲ್ಲ. ವಿಗ್ರಹ ಭಂಜಕ ಟಿಪ್ಪು ಸುಲ್ತಾನನ ಜಯಂತಿ ಮಾಡುವಾಗ ನಿಮಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಅರಿವು ಇರಲಿಲ್ಲವೇ? ಎಂದು ತಿರುಗೇಟು ನೀಡಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿ ಓಟಿಗಾಗಿ ಹಿಂದೂ ಧರ್ಮವನ್ನು ಒಡೆಯಲು ನೀವು ಮುಂದಾಗಿದ್ದೀರಿ. ದೇವಾಲಯಗಳ ತೆರವು ವಿಚಾರವನ್ನೂ ನೀವು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು. ನೀವು ವಕೀಲರಾಗಿದ್ದೀರಿ, ಏಕೆ ನೀವು ಗಮನಹರಿಸಲಿಲ್ಲ..? ಎಂದು ಸಿದ್ಧರಾಮಯ್ಯಗೆ ಪ್ರಶ್ನಿಸಿದರು. ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಲೋಪವಾಗಿದೆ ಎಂದರು.
2018 ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಆಗ ಬಿಜೆಪಿ ಸರಕಾರ ಇತ್ತು, ಅವತ್ತು ಅಧಿಕಾರಿಗಳು ತಪ್ಪು ಮಾಡಿದರು. ಬಿಜೆಪಿ ಆಡಳಿತದಲ್ಲೂ ಆ ತಪ್ಪು ನಡೆಯಿತು. ನಿಮ್ಮ ಅಧಿಕಾರದಲ್ಲೂ ಆ ತಪ್ಪು ಮುಂದುವರಿಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ. ರಾಜಕಾರಣಿಗಳು ಅಧಿಕಾರಿಗಳು ಮಾಡುವ ತಪ್ಪನ್ನು ತಮ್ಮ ಮೇಲೆ ಎಳೆದುಕೊಳ್ಳಬೇಡಿ ಎಂದರು.
ತಪ್ಪು ಎಲ್ಲ ಕಡೆಯಿಂದಲೂ ಆಗಿದೆ ಅನ್ನೋದನ್ನು ಒಪ್ಪಿಕೊಳ್ಳಿ ನೀವು ನೀವು ಹೊಡೆದಾಡದೆ ಎಲ್ಲರ ಭಾವನೆ ಗೌರವಿಸಿ. ಎಲ್ಲರೂ ವಿಶ್ವಾಸದಿಂದ ನಿರ್ಧಾರವನ್ನು ತೆಗೆದುಕೊಳ್ಳಿ ಯಾರ ಮೇಲೂ ಗೂಬೆ ಕೂರಿಸಲು ನಾನು ಬಂದಿಲ್ಲ ಎಂದು ನುಡಿದರು.