ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂಸ್
ಬೆಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಹಿಂದೂ, ಮುಸ್ಲಿಂ ಖೈದಿಗಳನ್ನು ಒಂದೇ ಸೆಲ್ನಲ್ಲಿ ಹಾಕಿ. ಅವರನ್ನು ಬೇರೆ ಬೇರೆ ಸೆಲ್ಗಳಿಗೆ ಹಾಕೋದು ಯಾಕೆ? ಎಂದು ಪ್ರಶ್ನಿಸಿದರು.
ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಒಂದು ಸೆಲ್ ನಲ್ಲಿ ಹಿಂದೂ ಕೈದಿಗಳಿದ್ರೆ, ಮತ್ತೊಂದು ಸೆಲ್ ನಲ್ಲಿ ಮುಸ್ಲಿಂ ಕೈದಿಗಳಿದಾರೆ. ಈ ತಾರತಮ್ಯ ಜೈಲಿನಲ್ಲೂ ನಡೆಯುತ್ತಿದೆ. ಈ ತಾರತಮ್ಯ ಜೈಲಿನಲ್ಲೂ ನಡೆಯುತ್ತಿದೆ. ಇದನ್ನು ನಿಲ್ಲಿಸಿ ಎಂದರು.
ಜೈಲಿನಲ್ಲಿ ನೀವು ಈ ರೀತಿ ಮಾಡಿದರೆ, ಅವರು ಹೊರಗೆ ಬಂದು ಏನ್ ಮಾಡ್ತಾರೆ? ಅದೇ ಮನಸ್ಥಿತಿ ಇಟ್ಟುಕೊಂಡು ಬಂದು ಹೊರಗೂ ಬಂದು ಅದೇ ಕೆಲಸ ಮಾಡುತ್ತಾರೆ.
ಅವರನ್ನು ಅಲ್ಲೇ ಒಟ್ಟಿಗೆ ಹಾಕಿ, ಅಲ್ಲಿ ಅವರು ಹೊಡೆದುಕೊಂಡು ಸಾಯಲಿ. ಹೊರಗೆ ಬಂದು ಗಲಾಟೆ ಮಾಡೋದು ಬೇಡ. ಅಷ್ಟೇ ಅಲ್ಲದೆ, ಕ್ರಿಮಿನಲ್ಗಳ ಭೇಟಿ ಮಾಡುವ ವಿಸಿಟರ್ಗಳ ಮೇಲೆ ನಿಗಾ ವಹಿಸಲು ಕ್ರಮ ವಹಿಸಿ ಎಂದು ಸರ್ಕಾರಕ್ಕೆ ಖಾದರ್ ಸಲಹೆ ನೀಡಿದರು.