ದೆಹಲಿ ಕೋರ್ಟ್ ಆವರಣದಲ್ಲಿ ಶೂಟ್ ಔಟ್ : 3 ಸಾವು, ಹಲವರಿಗೆ ಗಾಯ | ಜನತಾ ನ್ಯೂಸ್
ನವದೆಹಲಿ : ನಗರದ ನ್ಯಾಯಾಲಯದೊಳಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭೂಗತಪಾತಕಿಗಳು ಸಾವನ್ನಪ್ಪಿದ್ದು, ಇನ್ನೂ ಹಲವರು ತೀವ್ರವಾಗಿ ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಕೀಲರ ವೇಷ ಧರಿಸಿದ ಇಬ್ಬರು ಬಂದೂಕುಧಾರಿಗಳು ನ್ಯಾಯಾಲಯದೊಳಗೆ ಪ್ರವೇಶಿಸಿದ್ದು, ವಿಚಾರಣೆಗೆಂದು ಬಂದ ಭೂಗತಪಾತಕಿ ಜಿತೇಂದರ್ ಮನ್ನ ಗೋಗಿಯ ಮೇಲೆ ಮೂರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗೋಗಿ ಬೆಂಗಾವಲು ನೀಡುತ್ತಿದ್ದ ವಿಶೇಷ ಪಡೆ ಸಿಬ್ಬಂದಿಗಳು ನಂತರ ಪ್ರತಿದಾಳಿಯಾಗಿ ಗುಂಡು ಹಾರಿಸಿದ ಪರಿಣಾಮ ದಾಳಿಕೋರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ವೀಡಿಯೊಗಳಲ್ಲಿ, ಉತ್ತರ ದೆಹಲಿಯ ರೋಹಿಣಿಯಲ್ಲಿರುವ ನ್ಯಾಯಾಲಯದ ಕಟ್ಟಡದಲ್ಲಿ ಗುಂಡಿನ ಸದ್ದುಗಳು ಕೇಳಿಬರುತ್ತಿತ್ತು ಹಾಗೆಯೇ ಪೊಲೀಸರು ಮತ್ತು ವಕೀಲರು ಹರಸಾಹಸಪಡುವುದು ಕಂಡುಬಂದಿದೆ.
ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಕಳೆದ ವರ್ಷದಿಂದ ತಿಹಾರ್ ನಲ್ಲಿ ಜೈಲಿನಲ್ಲಿದ್ದ ಕುಖ್ಯಾತ ಭೂಗತಪಾತಕಿ ಜಿತೇಂದರ್ ಮನ್ನ ಗೋಗಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಲ್ಲಿ ಆತನು ಮೃತಪಟ್ಟಿದ್ದಾನೆ, ಎಂದು ಘೋಷಿಸಲಾಗಿದೆ.
ಈ ಘಟನೆಯು ನ್ಯಾಯಾಲಯದ ಆವರಣದಲ್ಲಿ ಭಾರೀ ಭದ್ರತಾ ಲೋಪವನ್ನು ಸೂಚಿಸುತ್ತದೆ.