ಮತಾಂತರ ನಿಷೇಧ ಮಸೂದೆಗೆ ಬಾಲ ಸುಟ್ಟ ಬೆಕ್ಕುಗಳ ರೀತಿ ಯಾಕೆ ಬಿಷಪ್ಗಳು ಚಡಪಡಿಸುತ್ತಿದ್ದಾರೆ - ಪ್ರತಾಪ್ ಸಿಂಹ | ಜನತಾ ನ್ಯೂಸ್
ಮೈಸೂರು : ಮತಾಂತರ ನಿಷೇಧ ಮಸೂದೆಗೆ ಬಾಲ ಸುಟ್ಟ ಬೆಕ್ಕುಗಳ ರೀತಿ ಯಾಕೆ ಬಿಷಪ್ಗಳು ಚಡಪಡಿಸುತ್ತಿದ್ದಾರೆ, ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಕುರಿತು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿರುವ ವೀಡಿಯೊ ಒಂದನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಕ್ರಿಶ್ಚಿಯನ್ ಮಿಷನರಿ ಬಿಷಪ್ ಗಳ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದನ್ನು ಪ್ರಸ್ತಾಪಿಸಿದ ಸಂಸದರು, ಮತಾಂತರ ಕಾಯಿದೆಯ ವಿಚಾರ ಬಂದ ಕೂಡಲೇ ವಿವಿಧ ಬಿಷಪ್ ಗಳು ಮುಖ್ಯಮಂತ್ರಿಗಳನ್ನು ಭೇಟಿಮಾಡಿ. ಈ ರೀತಿಯ ಕಾಯಿದೆ ತರಬೇಡಿ. ನಾವ್ಯಾರೂ ಮತಾಂತರದಲ್ಲಿ ತೊಡಗಿಲ್ಲ ಎನ್ನುತ್ತಿದ್ದಾರೆ. ನೀವು ಮತಾಂತರದಲ್ಲಿ ತೊಡಗಿಲ್ಲ ಎಂದಾದರೆ ನಿಮಗೆ ಆತಂಕ, ಭಯ ಏತಕ್ಕೆ? ಎಂದು ಸಂಸದರು ಬಿಷಪ್ ಗಳಿಗೆ ಪ್ರಶ್ನಿಸಿದ್ದಾರೆ.
ಅಲ್ಲಾ, ಈ ಬಿಷಪ್ ಗಳು ಏಕಾಏಕಿ ಒಂತರ ಈ ಬಾಲ ಸುಟ್ಟ ಬೆಕ್ಕಿನ ಹಾಗೆ ಚಡಪಡಿಸುತ್ತಿರುವುದು ಯಾಕೆ? ನೀವು ಮತಾಂತರ ಮಾಡುತ್ತಿಲ್ಲ ಎಂದಾದರೆ. ನಾವು ಮತಾಂತರ ನಿಷೇದ ಕಾಯಿದೆಯನ್ನು ತರುತ್ತೇವೆ. ಯಾರಾದರೂ ಹಾಗೆ ಮಾಡುತ್ತಿದ್ದವರಿಗೆ ಅದರಿಂದ ಅನನುಕೂಲತೆ ಆಗುತ್ತದೆ, ಎಂದು ಹೇಳಿದ್ದಾರೆ.