ಭಿಕ್ಷೆ ಬೇಡುತ್ತಿದ್ದ ಬಾಲಕಿಗೆ ಎಗ್ರೈಸ್- ಗೋಬಿ ಮಂಚೂರಿ ತಿನ್ನಿಸುವ ಆಸೆ ತೋರಿಸಿ ಅತ್ಯಾಚಾರ! | ಜನತಾ ನ್ಯೂಸ್
ಧಾರವಾಡ : ಧಾರವಾಡ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 13 ವರ್ಷದ ಬಾಲಕಿಗೆ ಎಗ್ರೈಸ್ ಮತ್ತು ಗೋಬಿ ಮಂಚೂರಿಯನ್ನು ತಿನ್ನಿಸುವ ಆಸೆ ಹುಟ್ಟಿಸಿ ತನ್ನತ್ತ ಕರೆದ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಎಂಬಾತ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಅತ್ಯಾಚಾರ ಆರೋಪಿ. ಧಾರವಾಡ ನಗರದಲ್ಲಿ 13 ವರ್ಷದ ಬಾಲಕಿಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು. ಈಕೆಯನ್ನ ಕಂಡ ಮಕ್ಕಳ ರಕ್ಷಣಾ ಘಟಕದ ಸದದಸ್ಯರು ಬಾಲಮಂದಿರಕ್ಕೆ ಕರೆದೊಯ್ದು ಕೌನ್ಸೆಲಿಂಗ್ ಮಾಡುವಾಗ ಬಾಲಕಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟಿದ್ದು, ಆರೋಪಿಯನ್ನ ಬಂಧಿಸಲಾಗಿದೆ.
ಬಾಲಕಿಯ ಮಾಹಿತಿ ಆಧರಿಸಿ ಮಹಿಳಾ ಘಟಕದ ಅಧಿಕಾರಿ ಕಮಲಾ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
English summary :Dharwad