ಲಾಡ್ಜ್ನಲ್ಲಿ ಇಬ್ಬರು ಯುವಕರು ನೇಣಿಗೆ ಶರಣು! | ಜನತಾ ನ್ಯೂಸ್
ಶಿವಮೊಗ್ಗ : ಶಿವಮಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್ವೊಂದರಲ್ಲಿ ಯುವಕರಿಬ್ಬರು ನೇಣಿಗೆ ಶರಣಾಗಿದ್ದಾರೆ.
ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಮೃತ ದುರ್ದೈವಿಗಳು. ಸಂತೋಷ್ ಮತ್ತು ಹನುಮಂತ ಸೆ. 24ರ ತಡರಾತ್ರಿ ಲಾಡ್ಜ್ಗೆ ಬಂದು ಡಬಲ್ ಬೆಡ್ರೂಂ ಬಾಡಿಗೆಗೆ ಪಡೆದಿದ್ದರು.
ಮರುದಿನ ಹೊರಗಿನಿಂದ ಊಟ ತಂದು ರೂಮ್ ಸೇರಿಕೊಂಡವರು ಮತ್ತೆ ವಾಪಸ್ ಹೊರಕ್ಕೆ ಬಂದಿಲ್ಲ. ರಾತ್ರಿ ರೂಮ್ ಬಾಯ್ ಕೂಡ ಬಾಗಿಲು ತಟ್ಟಿದ್ದಾನೆ. ಆದರೆ ಬಾಗಿಲು ತೆರೆಯಲಿಲ್ಲ.
ಬೆಳಗ್ಗೆ ಮತ್ತೊಮ್ಮೆ ಬಾಗಿಲು ತಟ್ಟಿದ್ದಾನೆ. ಆಗಲು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮ್ನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ರೂಮ್ನಲ್ಲಿರುವ ಎರಡು ಫ್ಯಾನ್ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.