ಉರಿ ಎಲ್ಓಸಿ ಬಳಿ ಕಾರ್ಯಾಚರಣೆಯಲ್ಲಿ 1 ಉಗ್ರ ತಟಸ್ಥ, 1 ಉಗ್ರ ತಟಸ್ಥ | ಜನತಾ ನ್ಯೂಸ್
ಉರಿ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ತಟಸ್ಥಗೊಳಿಸಲಾಗಿದ್ದು, ಇನ್ನೊಬ್ಬನ್ನನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ, 7 ಎ.ಕೆ. ಸರಣಿಯ ಶಸ್ತ್ರಾಸ್ತ್ರಗಳು, 9 ಪಿಸ್ತೂಲ್ಗಳು ಮತ್ತು ರಿವಾಲ್ವರ್ಗಳು ಮತ್ತು 80 ಕ್ಕೂ ಹೆಚ್ಚು ಗ್ರೆನೇಡ್ಗಳು ಮತ್ತು ಭಾರತೀಯ ಮತ್ತು ಪಾಕ್ ಕರೆನ್ಸಿಗಳು ಉರಿ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ತಟಸ್ಥಗೊಳಿಸಲಾಗಿದ್ದು, ಇನ್ನೊಬ್ಬ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ, ಎಂದು ಮೇಜರ್ ಜನರಲ್ ವೀರೇಂದ್ರ ವಾಟ್ಸ್ ಅವರು ಎಏನ್ಐಗೆ ತಿಳಿಸಿದ್ದಾರೆ.
ಕಳೆದ 9 ದಿನಗಳ ಕಾಲದಿಂದ ಉರಿ ವಲಯದಲ್ಲಿ ಎಲ್ಒಸಿ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು, ಎಲ್ಒಸಿಯಲ್ಲಿ ಭಾರತೀಯ ಗಸ್ತು ಪಡೆ ಒಳನುಸುಳುವಿಕೆಯ ಚಲನೆಯನ್ನು ಪತ್ತೆಹಚ್ಚಿದ ಬೆನ್ನಲ್ಲೇ ಸೆಪ್ಟೆಂಬರ್ 18ರಿಂದ ಉರಿ ವಲಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಎನ್ಕೌಂಟರ್ ನಡೆದಾಗ, 2 ಒಳನುಸುಳುಗಾರರು ಗಡಿಯೊಳಗೆ ಪ್ರವೇಶಿಸಿದ್ದರು ಹಾಗೂ ಇನ್ನೂ 4 ಉಗ್ರರು ಪಾಕಿಸ್ತಾನದ ಕಡೆ ಇದ್ದರು.
ಗುಂಡಿನ ಚಕಮಕಿಯ ನಂತರ, ಪಾಕ್ ಕಡೆಯ 4 ಭಯೋತ್ಪಾದಕರು ದಟ್ಟವಾದ ಎಲೆಗಳ ಲಾಭ ಪಡೆದು ಪಾಕ್ ಕಡೆ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನೂಳಿದ 2 ಭಯೋತ್ಪಾದಕರು ಭಾರತದ ಕಡೆಗೆ ನುಸುಳಿದ್ದರು. ಭಾರತಕ್ಕೆ ನುಸುಳಿರುವ 2 ಭಯೋತ್ಪಾದಕರನ್ನು ಸುತ್ತುವರಿಯಲು ಹೆಚ್ಚುವರಿ ಪಡೆಗಳನ್ನು ಸಜ್ಜುಗೊಳಿಸಲಾಗಿದೆ.
ಸೆಪ್ಟೆಂಬರ್ 25 ರಂದು, ಒಂದು ಎನ್ಕೌಂಟರ್ ನಡೆಯಿತು, ಈ ಸಮಯದಲ್ಲಿ ಒಬ್ಬ ಭಯೋತ್ಪಾದಕನು ತಟಸ್ಥಗೊಂಡನು, ಇನ್ನೊಬ್ಬನನ್ನು ಸೆರೆ ಹಿಡಿಯಲಾಯಿತು. ಬಂಧನದಲ್ಲಿದ್ದ ಶರಣಾದ ಭಯೋತ್ಪಾದಕ ತನ್ನನ್ನು ಪಾಕ್ ನ ಪಂಜಾಬ್ ಪ್ರಾಂತ್ಯದ ಅಲಿ ಬಾಬರ್ ಪತ್ರ ಎಂದು ಗುರುತಿಸಿಕೊಂಡಿದ್ದಾನೆ. ಅವರು ಎಲ್ಇಟಿ ಸದಸ್ಯ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಮುಜಾಫರಾಬಾದ್ನಲ್ಲಿ ಅವರಿಂದ ತರಬೇತಿ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಈ ಒಳನುಸುಳುವಿಕೆ ಪ್ರಯತ್ನವನ್ನು ಸಲಾಮಾಬಾದ್ ನಾಲಾ ಪ್ರದೇಶದಲ್ಲಿ ಮಾಡಲಾಗಿದ್ದು, 2016ರಲ್ಲಿ ಅದೇ ಪ್ರದೇಶದಲ್ಲಿ ನಾವು ಒಳನುಸುಳುವಿಕೆಯ ಇತಿಹಾಸವನ್ನು ಕಂಡಿದ್ದೇವೆ. ಈ ಒಳನುಸುಳುವಿಕೆ ಗುಂಪನ್ನು ಪಾಕ್ ಕಡೆಯಿಂದ 3 ಪೋರ್ಟರ್ಗಳು ಬೆಂಬಲದೊಂದಿಗೆ ಎಲ್ಒಸಿ ವರೆಗೆ ಬಂದಿದ್ದರು.
ಇನ್ನೊಂದು ಬದಿಯಲ್ಲಿ ನಿಯೋಜಿಸಲಾಗಿರುವ ಪಾಕ್ ಸೇನೆಯ ಸಹಭಾಗಿತ್ವವಿಲ್ಲದೆ ಇಷ್ಟು ದೊಡ್ಡ ಗುಂಪಿನ ಜನರ ಚಲನೆ ನಡೆಯಲು ಸಾಧ್ಯವಿಲ್ಲ. ಎಲ್ಒಸಿಯಾದ್ಯಂತ ಲಾಂಚ್ ಪ್ಯಾಡ್ಗಳಲ್ಲಿ ಚಲನೆಗಳು ಕಂಡುಬಂದಿವೆ. ಕಳೆದ 7 ದಿನಗಳಲ್ಲಿ 7 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ, 1 ಭಯೋತ್ಪಾದಕರನ್ನು ಬಂಧಿಸಲಾಗಿದೆ, ಎಂದು ಮೇಜರ್ ಹೇಳಿದ್ದಾರೆ.