ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ | ಜನತಾ ನ್ಯೂಸ್
ಅಮೃತಸರ : ಪಂಜಾಬ್ ಹೊಸ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸಚಿವ ಸಂಪುಟದಲ್ಲಿ ಅವರೊಂದಿಗಿನ ಭಿನ್ನಾಭಿಪ್ರಾಯದ ವರದಿಗಳ ನಡುವೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಧು ಹಾಗೂ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಜಗಳ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲೇ ಹೊಸ ಬಿಕ್ಕಟ್ಟು ಉಣ್ಬವಿಸಿದೆ. ಈ ಆಂತರಿಕ ಪಕ್ಷದ ಜಗಳಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಸೋತಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ. ಬಹು ಮುಖ್ಯವಾಗಿ, ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲು ಕೆಲವು ಗಂಟೆಗಳ ಮೊದಲು ಭಾನುವಾರ ತೊಂದರೆ ಉಂಟಾಗಲು ಆರಂಭವಾಗಿದ್ದು, ಸಿಧು ಅವರ ರಾಜೀನಾಮೆ ಈಗ ಪಂಜಾಬ್ ಹೊಸ ಕ್ಯಾಬಿನೆಟ್ ಮುಂದುವರಿಕೆಗೆ ದೊಡ್ಡ ಪ್ರಶ್ನೆಯಾಗಿದೆ.
ಸದ್ಯಕ್ಕೆ ರಾಜೀನಾಮೆ ನೀಡಿರುವ ಸಿದ್ದು ಅವರ ಮುಂದಿನ ಕ್ರಮದ ಬಗ್ಗೆ ಊಹಾಪೋಹಗಳು ಎದ್ದಿವೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಹಾರಿರುವ ಸಿಧು ಈಗ ಎಎಪಿ ಗೆ ಸೇರುವ ಸಾದ್ಯತೆಗಳಿವೆ, ಎನ್ನುವುದು ಕೆಲವರ ವಾದವಾಗಿದೆ.
ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಬುಧವಾರದಿಂದ 2 ದಿನಗಳ ಪಂಜಾಬ್ಗೆ ಭೇಟಿ ನೀಡಲಿದ್ದಾರೆ. ವಿಶೇಷ ಎಂದರೆ, ಮುಂಬರಲಿರುವ 2022 ಚುನಾವಣೆಯಲ್ಲಿ ರಾಜ್ಯದ ಸಿಎಂ ಮುಖವನ್ನು ಇನ್ನೂ ಘೋಷಿಸಿಲ್ಲ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸದ್ಯಕ್ಕೆ ದೆಹಲಿಯಲ್ಲಿದ್ದು ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಹಾರುವ ಸಿದ್ದತೆ ನಡೆಸಿದ್ದಾರೆ, ಎಂದು ಹೇಳಲಾಗಿದೆ. ಸಿಧು ರಾಜೀನಾಮೆಗೆ ಪ್ರತಿಕ್ರಿಯಿಸಿದ ಅಮರೀಂದರ್ ಅವರು ಪಂಜಾಬ್ಗೆ ಸೂಕ್ತವಲ್ಲ ಎಂದು ಟ್ವೀಟ್ ಮಾಡಿದ್ದಾರೆ. "ನಾನು ನಿಮಗೆ ಹೇಳಿದೆ ... ಅವರು ಸ್ಥಿರ ವ್ಯಕ್ತಿ ಅಲ್ಲ ಮತ್ತು ಪಂಜಾಬ್ ಗಡಿ ರಾಜ್ಯಕ್ಕೆ ಸರಿಹೊಂದುವುದಿಲ್ಲ" ಎಂದು ಅವರು ಬರೆದಿದ್ದಾರೆ.