ಬಿಎಂಟಿಸಿ ಕೆಲಸದಿಂದ ವಜಾಗೊಂಡ ನೌಕರ, ಡಿಪೋ ಮ್ಯಾನೇಜರ್ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ! | ಜನತಾ ನ್ಯೂಸ್
ಬೆಂಗಳೂರು : ಬಿಎಂಟಿಸಿ ಯಿಂದ ವಜಾಗೊಂಡ ನೌಕರರೊಬ್ಬರು ಇಂದಿರಾನಗರದ ಡಿಪೋ-6ರ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬಿಎಂಟಿಸಿ ನೌಕರರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಿಎಂಟಿಸಿ ಕೆಲಸದಿಂದ ವಜಾಗೊಂಡ ನೌಕರ ಡಿಪೋ ಮ್ಯಾನೇಜರ್ ಮುಂದೆಯೇ ಸೂಸೈಡ್ಗೆ ಯತ್ನಿಸಿದ್ದಾರೆ.
ಇಂದಿರಾ ನಗರದ ಡಿಪೋ- 6ರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಮುಷ್ಕರದ ವೇಳೆ ಈತ ಬಿಎಂಟಿಸಿ ಸೇವೆಯಿಂದ ವಜಾಗೊಂಡಿದ್ದ. ಹೀಗಾಗಿ ಕೆಲಸವಿಲ್ಲದೆ ಕೇಶವ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗ್ತಿದೆ. ಸದ್ಯ ಬಿಎಂಟಿಸಿ ನೌಕರನನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
RELATED TOPICS:
English summary :Bangalore