ಪಟಾಕಿ ಸದ್ದಿಗೆ ಗಲಿಬಿಲಿಗೊಂಡ ದಸರಾ ಆನೆ : ಕೂದಲೆಳೆಯಲ್ಲಿ ತಪ್ಪಿದ ಭಾರಿ ಅನಾಹುತ | ಜನತಾ ನ್ಯೂಸ್
ಶ್ರೀರಂಗಪಟ್ಟಣ : ಪ್ರಸ್ತುತ ನವರಾತ್ರಿಯ ದಸರಾ ಹಬ್ಬದ ಪ್ರಯುಕ್ತ ನಿನ್ನೆ ಶನಿವಾರ ಮಂಡ್ಯದ ಶ್ರೀರಂಗಪಟ್ಟಣ ಪ್ರದೇಶದ ದಸರಾ ಆಚರಣೆಯ ಮೆರವಣಿಗೆ ಭಾಗಿಯಾಗಿದ್ದ ಆನೆ ಒಂದುಕ್ಷಣ ಅಡ್ಡಾದಿಡ್ಡಿ ಓಡಿದ್ದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಶ್ರೀರಂಗಪಟ್ಟಣದ ದಸರಾ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಮತ್ತು ಸಂಗೀತದ ಶಬ್ದದಿಂದಾಗಿ ದೇವರ ಪಲ್ಲಕಿ ಹೊತ್ತ ಆನೆ ಒಂದು ಕ್ಷಣ ಗಾಬರಿಗೊಂಡಂತೆ ಕಂಡುಬಂದಿದ್ದು, ಒಂದು ಕ್ಷಣದಲ್ಲಿ ಪಕ್ಕದಲ್ಲೇ ಇದ್ದ ಇನ್ನೊಂದು ಆನೆಯ ಸುತ್ತ ಸುತ್ತಿದೆ.
ಆ ಸಂದರ್ಭದಲ್ಲಿ ಆನೆಯ ಸೂತ್ತಮುತ್ತ ಜನಜಂಗುಳಿ ಇದ್ದರೂ ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲ. ಆನೆಯ ಮಾವುತರು ಹಾಗೂ ಸಿಬ್ಬಂದಿಗಳು ಆನೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮೂಲಕ ಭಾರಿ ಅನಾಹುತ ತಪ್ಪಿಸಿದ್ದಾರೆ.
RELATED TOPICS:
English summary :Dasara elephant panicked on crackers sound : Major disaster averted