₹50 ಲಕ್ಷಕ್ಕಾಗಿ ಫಿಲ್ಮಿ ಸ್ಟೈಲ್ನಲ್ಲಿ ಉದ್ಯಮಿಯ ಅಪಹರಿಸಿ ಸಿಕ್ಕಿಬಿದ್ದ ನಿರ್ಮಾಪಕ! | ಜನತಾ ನ್ಯೂಸ್
ಬೆಂಗಳೂರು : ನಿರ್ಮಾಪಕನೊಬ್ಬ ತಾನೂ ಐಟಿ ಅಧಿಕಾರಿ ಎಂದು ಹೇಳಿಕೊಂಡು ಸಿನಿಮೀಯ ರೀತಿಯಲ್ಲಿ ಉದ್ಯಮಿಯ ಅಪಹರಣ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಪಕ್ಕಾ ಸಿನಿಮಾ ಶೈಲಿಯಲ್ಲೇ ಹಾಡ ಹಗಲೇ ವ್ಯಾಪಾರಿಯ ಅಪಹರಣ ಮಾಡಿದ್ದರು. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐಟಿ ಅಧಿಕಾರಿಗಳ ವೇಷ ಧರಿಸಿ ಶ್ರೀನಿವಾಸನ್ ಕಿಡ್ನಾಪ್ ಮಾಡಲಾಗಿತ್ತು.
ಶ್ರೀನಿವಾಸನ್ ಬಳಿ ಕೋಟ್ಯಂತರ ರೂಪಾಯಿ ದುಡ್ಡು ಇರುವುದು ಗೊತ್ತಾಗಿ, ತಮ್ಮ ಸ್ಕೆಚ್ನಂತೆ ಪ್ರಕ್ರಿಯೆ ಶುರು ಮಾಡಿದ್ದಾರೆ. ಐಟಿ ಅಧಿಕಾರಿಗಳಂತೆ ವೇಷಭೂಷಣ ತೊಟ್ಟಿದ್ದಾರೆ. ಅದರಂತೆ ಸೆಪ್ಟೆಂಬರ್ 30 ರಂದು ಶ್ರೀನಿವಾಸನ್ ಅವರ ಕಾರನ್ನು ಅಡ್ಡಗಟ್ಟಿದ ಇವರು, ಅವರನ್ನು ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರನ್ನು ಕೆಳಕ್ಕೆ ಇಳಿಸಿ, "ನಿಮ್ಮ ಬಗ್ಗೆ ತೆರಿಗೆ ವಂಚನೆ ದೂರುಗಳು ಬಂದಿವೆ. ಒಂದೂವರೆ ಕೋಟಿ ಟ್ಯಾಕ್ಸ್ ವಂಚನೆ ಮಾಡಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳು ಇವೆ. 50 ಲಕ್ಷ ರೂ. ಹಣ ನೀಡದೇ ಇದ್ದರೆ, ಕೇಸ್ ಹಾಕಿ ಒಳಗೆ ಹಾಕುತ್ತೇವೆ" ಎಂದಿದ್ದಾರೆ.
ಶಶಿಕುಮಾರ್ ತಂಡ 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಇಪ್ಪತ್ತು ಲಕ್ಷಕ್ಕೆ ಡೀಲ್ ಮಾಡಿಕೊಂಡು ಕಳುಹಿಸಿದ್ದಾರೆ. ಶ್ರೀನಿವಾಸನ್ ಅವರು ಪೊಲೀಸರಿಗೆ ಕೂಡಲೇ ದೂರು ನೀಡಿದ್ದಾರೆ. ಇದರ ಬೆನ್ನಟ್ಟಿ ಹೋಗಿರುವ ಪೊಲೀಸರು ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.