ರೈಲಿನಲ್ಲಿ ಮರೆತು ಹೋಗಿದ್ದ ₹7.31 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್! | ಜನತಾ ನ್ಯೂಸ್
ದಾವಣಗೆರೆ : ರೈಲಿನಲ್ಲಿ ಮರೆತು ಹೋಗಿದ್ದ ಸುಮಾರು ₹7.31 ಲಕ್ಷ ಮೌಲ್ಯದ ವಸ್ತುಗಳನ್ನ ರೈಲ್ವೆ ಭದ್ರತಾ ಪಡೆ ಸಿಬ್ಬಂದಿ ಬ್ಯಾಗ್ನ ವಾರಸುದಾರರಿಗೆ ವಾಪಸ್ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿ ಶ್ರೀನಿವಾಸರಾಜ್ ದಂಪತಿ ಮೈಸೂರು-ಸೊಲ್ಲಾಪುರ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವಾಗ ತಮ್ಮ ಬ್ಯಾಗ್ ಬಿಟ್ಟು ಹೋಗಿದ್ದರು. ಹರಿಹರದಲ್ಲಿ ಇಳಿದು ಬರುವಾಗ ಟ್ರೈನ್ ನಲ್ಲಿ ಬ್ಯಾಗ್ ಬಿಟ್ಟಿದ್ದು ನೆನಪಾಗಿ ರೇಲ್ವೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಬ್ಯಾಗ್ನಲ್ಲಿ 154 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಒಂದು ಮೊಬೈಲ್ ಸೇರಿ ಸುಮಾರು 7.31 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ. ಮಾಹಿತಿ ಪಡೆದು ಶೋಧ ನಡೆಸಿದ ಸಿಬ್ಬಂದಿ ಬ್ಯಾಗ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತಲ್ಲದೇ ಅದನ್ನ ಶ್ರೀನಿವಾಸರಾಜ್ಗೆ ತಲುಪಿಸಿದ್ದಾರೆ.