ಪಾಕಿಸ್ತಾನದ ನಾಗರಿಕ ಉಗ್ರನನ್ನು, ಶಸ್ತ್ರಾಸ್ತ್ರದೊಂದಿಗೆ ಬಂಧನ : ನವರಾತ್ರಿ ಸಂದರ್ಭದ ಹುನ್ನಾರ ವಿಫಲ | ಜನತಾ ನ್ಯೂಸ್
ನವದೆಹಲಿ : ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಸಂಚನ್ನು ಹೊಂದಿದ ಪಾಕಿಸ್ತಾನದ ನಾಗರಿಕನನ್ನು ಭಯೋತ್ಪಾದಕನನ್ನು ದೆಹಲಿ ಪೋಲಿಸ್ ಸ್ಪೆಷಲ್ ಸೆಲ್ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಭಯೋತ್ಪಾದಕನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಸ್ರಫ್ ಎಂದು ಗುರುತಿಸಲಾಗಿದೆ.
ರಾಷ್ಟ್ರ ರಾಜಧಾನಿಯ ಲಕ್ಷ್ಮಿ ನಗರದ ರಮೇಶ್ ಪಾರ್ಕ್ ದಲ್ಲಿ ಆತ ಭಾರತೀಯ ಪ್ರಜೆಯ ನಕಲಿ ಐಡಿಯೊಂದಿಗೆ ವಾಸಿಸುತ್ತಿದ್ದ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.
ಒಂದು ಹೆಚ್ಚುವರಿ ಮ್ಯಾಗಜಿನ್ ಮತ್ತು 60 ಸುತ್ತುಗಳಿರುವ ಒಂದು ಎಕೆ-47 ರೈಫಲ್, ಒಂದು ಹ್ಯಾಂಡ್ ಗ್ರೆನೇಡ್, 2 ಅತ್ಯಾಧುನಿಕ ಪಿಸ್ತೂಲ್ಗಳೊಂದಿಗೆ 50 ಸುತ್ತು ವಶಪಡಿಸಿಕೊಳ್ಳಲಾಗಿದೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜಧಾನಿಯಲ್ಲಿ ಭಾರಿ ಪ್ರಮಾಣದ ಅನಾಹುತ ನಡೆಸುವ ಪಾಕಿಸ್ತಾನದ ಸಂಚನ್ನು ಈ ಮೂಲಕ ವಿಫಲಗೊಳಿಸಿದಂತಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯಿದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಬಂಧಿತನ ವಿರುದ್ಧದ ಇತರ ನಿಬಂಧನೆಗಳನ್ನು ಅನ್ವಯಿಸಲಾಗಿದೆ. ದೆಹಲಿಯ ಲಕ್ಷ್ಮಿ ನಗರದ ರಮೇಶ್ ಪಾರ್ಕ್ನಲ್ಲಿ ಅವರ ಪ್ರಸ್ತುತ ವಿಳಾಸದಲ್ಲಿ ಹುಡುಕಾಟ ಮುಂದುವರೆದಿದೆ.