ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿತ : ಆತಂಕದಲ್ಲಿ ಜನ | ಜನತಾ ನ್ಯೂಸ್
ಬೆಂಗಳೂರು : ಮಂಗಳವಾರ ತಡರಾತ್ರಿ ಬೆಂಗಳೂರಿನ ಕಮಲಾನಗರದ ಶಂಕರನಾಗ್ ಬಸ್ ನಿಲ್ದಾಣದ ಬಳಿಯ ಕಾಲೋನಿಯಲ್ಲಿ ವಸತಿ ಕಟ್ಟಡವೊಂದು ಕುಸಿದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ, ವೃಷಭಾವತಿ ನಗರ ವಾರ್ಡ್, ಕಮಲನಗರದ ಶಂಕರ್ ನಾಗ್ ಬಸ್ಸ್ಟ್ಯಾಂಡ್ ಹಿಂಭಾಗದಲ್ಲಿ ಸುಮಾರು 15 ರಿಂದ 20 ವರ್ಷದ ಹಳೆಯ 15x40 ಅಳತೆ ಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ತಳಪಾಯ ಕುಸಿದಿದೆ. ಈ ಕಟ್ಟಡದಲ್ಲಿ ಒಟ್ಟು ಆರು ಕುಟುಂಬಗಳು ವಾಸವಿದ್ದವು.
ಆ ಮನೆಗಳಲ್ಲಿ ವಾಸವಿದ್ದ ಎಲ್ಲಾ ಜನರನ್ನು ಮತ್ತು ಸುತ್ತಮುತ್ತಲಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಹಾಗೂ ಆ ಕುಟುಂಬಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಸ್ಥಳಕ್ಕೆ ಸಚಿವರಾದ ಗೋಪಾಲಯ್ಯ ನವರು, ಬಿಬಿಎಂಪಿಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶಿಲಿಸಿದ್ದಾರೆ.