ನನ್ನ ಕಾಲದಲ್ಲಿ ಪರ್ಸೆಂಟೇಜ್ ವಿಷಯವೇ ಇರಲಿಲ್ಲ, ಯಾರನ್ನು ಬೇಕಿದ್ದರೂ ಕೇಳಿ ನೋಡಿ! | ಜನತಾ ನ್ಯೂಸ್
ವಿಜಯಪುರ : ದೇವೇಗೌಡರ ಕಾಲದಲ್ಲಿ ಪರ್ಸೆಂಟೇಜ್ ವಿಷಯವೇ ಇರಲಿಲ್ಲ ಎಂದ ಅವರು, ನಿಮಗೆ ಅನುಮಾನವಿದ್ದರೆ ಯಾರನ್ನು ಬೇಕಾದರೂ ಕೇಳಿ ಎಂದರು. ಯಾರ ಕಾಲದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು? ಯಾವ ಕಾಲದಲ್ಲಿ ಪರ್ಸೆಂಟೇಜ್ ಹೆಚ್ಚಾಯ್ತು ಎಂಬ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ.
ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಪ್ರಧಾನಿ, ಯಾರ್ಯಾರ ಕಾಲದಲ್ಲಿ, ಯಾವ ಕಾಲದಲ್ಲಿ ಈ ಪರ್ಸೆಂಟೇಜ್ ಇದೆ, ಇದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಾರ್ಯಾರು ನೀರಾವರಿ ಮಂತ್ರಿಗಳು, ಯಾವಾಗ ಆಯ್ತು, ಏನೇನು ಆಯ್ತು, ನಾನು ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ. ಮಾತ್ರವಲ್ಲ, ದೇವೇಗೌಡರ ಕಾಲದಲ್ಲಿ ಈ ಪರ್ಸೆಂಟೇಜ್ ವಿಷಯವೇ ಇರಲಿಲ್ಲ, ನೀವು ಯಾರನ್ನು ಬೇಕಾದರೂ ಕೇಳಿ, ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಮಿಷನ್ ಗಿರಾಕಿ ಎಂದು ಅವರದೇ ಪಕ್ಷದ ಉಗ್ರಪ್ಪ ಹಾಗೂ ಸಲೀಂ ಬಹಿರಂಗವಾಗಿ ಮಾತನಾಡಿರುವ ವಿಡಿಯೋ ವೈರಲ್ ಆದ ಬೆನ್ನಿಗೆ, ಈ ವಿಷಯದ ಕುರಿತು ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಯಾವ್ಯಾವ ನೀರಾವರಿ ಮಂತ್ರಿಗಳ ಅವಧಿಯಲ್ಲಿ ಏನೇನು ಆಯ್ತು ಎಂಬುದೂ ನನಗೆ ಬೇಡ. ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ, ಯಾವುದೇ ಅಧಿಕಾರಿಯನ್ನು ಕೇಳಿನೋಡಿ, ನಂತರವೇ ನಂಬಿ ಎಂದು ನುಡಿದರು. ಬೇರೆಯವರ ಭ್ರಷ್ಟಾಚಾರದ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು.