ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂಸ್
ಚಿಕ್ಕಮಗಳೂರು : ರಾಮಮಂದಿರಕ್ಕೆ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು ಎಂದು ಲೆಕ್ಕ ಕೇಳಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, "ನಾವು ರಾಮಮಂದಿರ ಹೋರಾಟ ಮಾಡುವಾಗ ನೀವು ಮಸೀದಿ ಜಪ ಮಾಡುತ್ತಿದ್ರಿ. ನಾವು ಮನೆ-ಮನೆಗೆ ಹೋಗಿ ರಾಮ ಮಂದಿರದ ವಿಚಾರ ತಿಳಿಸುತ್ತಿದ್ವಿ. ನೀವು ಟೋಪಿ ಹಾಕೊಂಡು ನಮಾಜ್ ಮಾಡೋಕೆ ಹೋಗ್ತಿದ್ದಿರಿ, ರಾಮಮಂದಿರ ಹೋರಾಟದಲ್ಲಿ ನಿಮ್ಮ ಪಾತ್ರ ಏನು ತಿಳಿಸಿ, ನೀವು ಎಷ್ಟು ಹಣ ಕೊಟ್ಟಿದ್ದೀರಿ? ನೀವು ಕೊಟ್ಟಿರುವ ಹಣದ ಲೆಕ್ಕ ಹೇಳಿ ಮೊದಲು. ಆಮೇಲೆ ರಾಮಮಂದಿರದ ಲೆಕ್ಕ ಕೇಳಿ ಎಂದು ಸವಾಲು ಹಾಕಿದರು.
ರಾಮಮಂದಿರದ ಹಣವನ್ನು ದುರುಪಯೋಗ ಮಾಡೋದಕ್ಕೆ ಫ್ಯಾಮಿಲಿ ಖಾನ್ ದಾನ್ ಅಲ್ಲಿಲ್ಲ. ರಾಮಮಂದಿರ ಹೋರಾಟದಲ್ಲಿ ನಿಮ್ಮ ಪಾತ್ರ ಏನು ತಿಳಿಸಿ. ರಾಮಮಂದಿರದ ನಿರ್ಮಾಣ ನೋಡಿ ಸಂಕಟ ಆಗ್ತಿದ್ಯಾ? ರಾಮಮಂದಿರದ ನಿರ್ಮಾಣ ಆದ ಮೇಲೆ ಪೂಜೆಗೆ ಬನ್ನಿ ಎಂದು ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.