ಕಲುಷಿತ ನೀರು ಸೇವನೆ ಶಂಕೆ, ಗರ್ಭಿಣಿ ಸಾವು, 12 ಜನರು ಅಸ್ವಸ್ಥ! | ಜನತಾ ನ್ಯೂಸ್
ಕಲಬುರಗಿ : ತಾಲ್ಲೂಕಿನ ಬೋಳಣಿ ಗ್ರಾಮದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು, ಕಲುಷಿತ ನೀರು ಸೇವಿಸಿ ವಾಂತಿಭೇದಿಯೇ ಸಾವಿಗೆ ಕಾರಣ ಎಂದು ಸಂಶಯ ಪಡಲಾಗಿದೆ.
ಸಾವನ್ನಪ್ಪಿರುವ ಮಹಿಳೆಯನ್ನು ಆರು ತಿಂಗಳ ಗರ್ಭಿಣಿ ಮಲ್ಲಮ್ಮ ಅಂತ ತಿಳಿದು ಬಂಧಿದೆ. ಇದೇ ವೇಳೆ 12 ಜನರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಇದೇ ಗ್ರಾಮದ ಮಹೇಶ ಸಿದ್ದಣ್ಣ ಆಲೂರೆ, ಶಿವಾನಂದ ಮೈಲಾರಿ ಶಹಬಾದ್, ಸುನಂದಾ ಪೂಜಾರಿ, ನಾಗಮ್ಮ ಪರೀಟ, ಶಿವಲಿಂಗ ಗಣಪತಿ, ರಾಮಚಂದ್ರ ಶರಣಪ್ಪ ಮೇಲ್ಕೇರಿ, ಗುರಮ್ಮ ವಿಠಲ ಮುಲಗೆ, ಚಿನ್ನಾ ಮಲ್ಕರೆ ಅವರಲ್ಲಿಯೂ ವಾಂತಿಭೇದಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಅವರು ಕಲಬುರಗಿ, ಆಳಂದ ಹಾಗೂ ಉಮರ್ಗಾದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಘಟನೆ ನಡೆದ ಬಳಿಕ ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಸದ್ಯ ಘಟನೆ ಪ್ರಮುಖ ಕಾರಣ ಮಳೆ ನೀರಿನ ಜೊತೆ ಕುಡಿಯುವ ನೀರಿನ ಪೈಪ್ಗೆ ಚರಂಡಿ ನೀರು ಮಿಶ್ರಣವಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ..