ಡ್ರಗ್ಸ್ ಪ್ರಕರಣ-ಶಾರೂಖ್ ಖಾನ್ ಮಗನಿಗೆ ಜಾಮೀನು ಇಲ್ಲ : ಸತ್ಯಮೇವ ಜಯತೆ ಎಂದ ಎನ್ಸಿಬಿ ಅಧಿಕಾರಿ | ಜನತಾ ನ್ಯೂಸ್
ಮುಂಬೈ : ಬಾಲಿವುಡ್ ನ ಪ್ರತಿಷ್ಠಿತ ಖಾನ್ ಕುಟುಂಬದ ಮಕ್ಕಳಲ್ಲಿ ಒಬ್ಬನಾದ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣವು ಈಗ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದೆ.
ನಟ ಶಾರೂಖ್ ಖಾನ್ ಅವರ ಮಗನನ್ನು ಈ ತಿಂಗಳ ಆರಂಭದಲ್ಲಿ ಕ್ರುಜ್ ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ರೇಡ್ ಸಮಯದಲ್ಲಿ ಬಂಧಿಸಿದ್ದು, ಎಷ್ಟೇ ಹರಸಾಹಸ ಪಟ್ಟರೂ ಆತ ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟ ಸಾಧ್ಯವಾಗಿದೆ.
ಆರ್ಯನ್ ಖಾನ್ ಮತ್ತು ಇನ್ನಿಬ್ಬರು ಜೈಲಿನಲ್ಲಿ ಉಳಿಯುತ್ತಾರೆ, ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ, ಎನ್ಸಿಬಿಯ ಅಧಿಕಾರಿ ಸಮೀರ್ ವಾಂಖೇಡೆ ಅವರು ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಮತ್ತು "ಸತ್ಯಮೇವ ಜಯತೆ" ಎಂದಷ್ಟೇ ಹೇಳಿದ್ದಾರೆ.
ಇಂದು ಆರ್ಯನ್ ಜಾಮೀನು ಅರ್ಜಿಯ ಮೇಲೆ ಮುಂಬೈ ಸೆಶನ್ ಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಆತನ ಜಾಮೀನು ಅರ್ಜಿಯನ್ನು ಮುಂಬೈ ಸೆಶನ್ ಕೋರ್ಟ್ ತಿರಸ್ಕರಿಸಿದೆ. ಮುಂಬೈನ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯವು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ. ಸಧ್ಯಕ್ಕೆ, ಅವರ ಕಾನೂನು ತಂಡವು ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಲು ಯೋಜಿಸುತ್ತಿದೆ.