ನೀವು ನಿಶ್ಚಿಂತರಾಗಿ ದೇಶವನ್ನು ರಕ್ಷಿಸಿ, ಮೋದಿ ಸರ್ಕಾರವು ನಿಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತದೆ - ಗೃಹಮಂತ್ರಿ ಷಾ | ಜನತಾ ನ್ಯೂಸ್
ಶ್ರೀನಗರ : ಕಣಿವೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವ ಗೃಹ ಮಂತ್ರಿ ಅಮಿತ್ ಷಾ ಅವರು ನಿನ್ನೆ ರವಿವಾರ ಗಡಿ ಭದ್ರತಾ ಪಡೆ(ಬಿಎಸ್ಎಫ್) ಪೋಸ್ಟ್ಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ.
ನಿನ್ನೆ ಮಕ್ವಾಲ್ ಗಡಿಯ ಮುಂದಿರುವ ಪ್ರದೇಶಗಳಿಗೆ ಭೇಟಿ ನೀಡಿದ ಷಾ ಅವರು ಗಡಿಯ ಸ್ಥಳೀಯ ನಿವಾಸಿಗಳ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು, ತಮ್ಮ ಮೊಬೈಲ್ ನಂಬರ್ ನ್ನೂ ಸಹ ಹಂಚಿಕೊಂಡಿದ್ದಾರೆ ಮತ್ತು ಆ ವ್ಯಕ್ತಿ ಯಾವಾಗ ಬೇಕಾದರೂ ಅವರನ್ನು ಸಂಪರ್ಕಿಸಬಹುದು, ಎಂದು ಆ ಸ್ಥಳೀಯ ನಿವಾಸಿಗೆ ಹೇಳಿದ್ದು ವಿಶೇಷವಾಗಿದೆ.
ಗೃಹ ಮಂತ್ರಿ ಅಮಿತ್ ಷಾ ಅವರು ಈ ಬಿಎಸ್ಎಫ್ ಪೋಸ್ಟ್ಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದ್ದು ನಮಗೆ ಹೆಮ್ಮೆಯ ವಿಷಯ. ಅವರು ನಮ್ಮ ಬ್ರೀಫಿಂಗ್ ಅನ್ನು ಆಲಿಸಿದರು. ನಾವು ಅವರಿಗೆ ಎಲ್ಲಾ ಗಡಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೇಳಿದ್ದೇವೆ, ಅವರು ಗಡಿ ಪ್ರಾಬಲ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು, ಎಂದು ಜಮ್ಮುವಿನ ಮಕ್ವಾಲ್ ಬಾರ್ಡರ್ನಲ್ಲಿರುವ ಬಿಎಸ್ಎಫ್ ನ ಎಡಿಜಿ ವೆಸ್ಟರ್ನ್ ಕಮಾಂಡ್, ಏನ್.ಎಸ್.ಜಮ್ವಾಲ್ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಗೃಹ ಸಚಿವರು ನಮ್ಮ ಯೋಧರೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದು ಒಂದು ದೊಡ್ಡ ಪ್ರೋತ್ಸಾಹ. ಇದು ಜವಾನರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ಇದು ಅವರ ಮನೋಬಲವನ್ನು ಹೆಚ್ಚಿಸುತ್ತದೆ. ನಮ್ಮ ಸುರಂಗಗಳು ಮತ್ತು ಡ್ರೋನ್ಗಳ ಸಮಸ್ಯೆಗಳನ್ನು ಗಮನಿಸಲಾಗುತ್ತಿದೆ ಮತ್ತು ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಅವರು(ಕೇಂದ್ರ ಗೃಹ ಸಚಿವ ಅಮಿತ್ ಶಾ) ಭರವಸೆ ನೀಡಿದ್ದಾರೆ, ಎಂದು ಏನ್.ಎಸ್.ಜಮ್ವಾಲ್ ಹೇಳಿದ್ದಾರೆ.
ಯೋಧರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಗೃಹ ಮಂತ್ರಿಯವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ರಕ್ಷಿಸುವ ನಮ್ಮ ಭದ್ರತಾ ಪಡೆಗಳ ಕಲ್ಯಾಣಕ್ಕೆ ಮತ್ತು ಅವರ ಕುಟುಂಬಗಳ ಆರೈಕೆಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ನೀವು ನಿಶ್ಚಿಂತರಾಗಿ ದೇಶವನ್ನು ರಕ್ಷಿಸಬೇಕು. ಮೋದಿ ಸರ್ಕಾರವು ನಿಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತದೆ, ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ಎಂದಿದ್ದಾರೆ.
प्रधानमंत्री श्री @narendramodi जी के नेतृत्व में केंद्र सरकार देश की सुरक्षा करने वाले हमारे सुरक्षाबलों के कल्याण व उनके परिजनों की देखरेख के प्रति पूरी तरह समर्पित है।
— Amit Shah (@AmitShah) October 24, 2021
मैं सभी से कहना चाहता हूँ कि आप चिंतामुक्त होकर देश की रक्षा करें आपके परिवारों की चिंता मोदी सरकार करेगी। pic.twitter.com/6kd1W9S4pZ
ಅಕ್ಟೋಬರ್ 23ರಂದು ಆರಂಭಗೊಂಡ ಗೃಹ ಸಚಿವರ ಕೇಂದ್ರಾಡಳಿತ ಪ್ರದೇಶಕ್ಕೆ ಮೂರು ದಿನಗಳ ಭೇಟಿಯ ಕೊನೆಯ ದಿನವಾದ ಇಂದು ಶ್ರೀನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.