ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ಕೆರೆ ಪಾಲು! | ಜನತಾ ನ್ಯೂಸ್
ಚಿಕ್ಕಮಗಳೂರು : ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಕೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಚಂದ್ರಕಟ್ಟೆಯ 11 ವರ್ಷದ ಬಾಲಕ ಸುಹಾಸ್ ಸಾವಿಗೀಡಾಗಿರುವ ವಿದ್ಯಾರ್ಥಿ. ಲಕ್ಯಾಗ್ರಾಮದ ದಿವಂಗತ ಹುಲಿಯಪ್ಪ ಮತ್ತು ರಾಧಾ ದಂಪತಿ ಪುತ್ರನಾದ ಶಿವಾಸ್ ಕೆಂಪನಹಳ್ಳಿಯಲ್ಲಿ ಅಜ್ಜನ ಮನೆಯಲ್ಲಿವಾಸ ಇದ್ದ. ಆರನೇ ತರಗತಿಯ ವಿದ್ಯಾರ್ಥಿ.
ಮಳೆ ಬಂದು ಕೆರೆ ಸಂಪೂರ್ಣ ತುಂಬಿತ್ತು, ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದಾನೆ.. ಆದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Chikkamagaluru