ಎನ್ಸಿಬಿ ಅಧಿಕಾರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದ್ದಕ್ಕೆ ಕೇಂದ್ರ ಸರ್ಕಾರದ ಮೇಲೆ ಶಿವಸೇನೆ ವಾಗ್ದಾಳಿ | ಜನತಾ ನ್ಯೂಸ್
ಮುಂಬೈ : ಡ್ರಗ್ಸ್ ಗೆ ಸಂಭಂದಪಟ್ಟ ಹಾಗೆ ಬಾಲಿವುಡ್ ನ ಪ್ರಭಾವಿ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ ನನ್ನು ಬಂಧಿಸಿದಕ್ಕಾಗಿ ಜೀವಬೆದರಿಕೆ ಎದುರಿಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಯವರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದ್ದಕ್ಕೆ ಆಡಳಿತರೂಡ ಶಿವಸೇನೆ ಈಗ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಆರಂಭಿಸಿದೆ.
ಕ್ರೂಸ್ ಶಿಪ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ನನ್ನು ಬಂಧಿಸಿದ ನಂತರ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಯವರ ಮೇಲೆ ಮಹಾರಾಷ್ಟ್ರ ಆಡಳಿತರೂಡ ಎನ್ಸಿಪಿ ಹಾಗೂ ಶಿವಸೇನೆ ನಿರಂತರ ವೈಯಕ್ತಿಕ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ವಾಂಖೆಡೆಯವರಿಗೆ ಜೀವಬೆದರಿಕೆ ಕರೆಗಳು ಬರುತ್ತಿರುವ ಕಾರಣ ಕೇಂದ್ರ ಸರ್ಕಾರ ಎನ್ಸಿಬಿ ಅಧಿಕಾರಿಗೆ ಝೆಡ್-ಪ್ಲಸ್ ಭದ್ರತೆ ನೀಡಿದೆ.
ಇದಕ್ಕೆ ಈಗ, "ಅರ್ಹರಲ್ಲದ ಜನರಿಗೆ ಭದ್ರತೆ ನೀಡುವಲ್ಲಿ ಕೇಂದ್ರ ಪಡೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ", ಎಂದು ಆರೋಪಿಸಿ ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ಇಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಝಡ್-ಪ್ಲಸ್ ಭದ್ರತೆ ಒದಗಿಸುವ ಕೇಂದ್ರದ ನಿರ್ಧಾರವನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವುತ್, ಕೇಂದ್ರವು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದರೆ, ಅವರನ್ನು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಕ್ಕೆ ಕಳುಹಿಸಲಿ, ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೇಂದ್ರವು ಸಾಕಷ್ಟು ಭದ್ರತಾ ಪಡೆಗಳನ್ನು ಹೊಂದಿದೆ ಎಂದು ತೋರುತ್ತಿದೆ, ಜನರಿಗೆ ಈ ರೀತಿಯ ಭದ್ರತೆಯನ್ನು ನೀಡಲಾಗುತ್ತದೆ. ಅವರು ಕಾಶ್ಮೀರ, ಅರುಣಾಚಲಕ್ಕೆ ಪಡೆಗಳನ್ನು ಕಳುಹಿಸಬೇಕು" ಎಂದು ಸಂಜಯ್ ರಾವತ್ ಹೇಳಿದರು, ಮಹಾರಾಷ್ಟ್ರ ಎಲ್ಲರಿಗೂ ಸುರಕ್ಷಿತ ರಾಜ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕುಟಿಲ ಕೆಲಸ ಮಾಡುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ, ಎಂದು ಅಕ್ರೋಶ ವ್ಯಕ್ತ ಪಡಿಸಿರುವ ರಾವತ್ ಏನೇ ಆದರೂ ವಿಚಾರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.