ಕೋಲಾರದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್! | ಜನತಾ ನ್ಯೂಸ್
ಕೋಲಾರ : ನಗರದ ಕಾರಂಜಿಕಟ್ಟೆ ಬಡಾವಣೆಯ ಒಂದೇ ಕುಟುಂಬದ ಐವರು ಪೊಲೀಸ್ ತನಿಖೆಯ ನಂತ್ರ ಮನನೊಂದು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಂತ ಪುಷ್ಪಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ನಂತ್ರ, ಇನ್ನೂಳಿದ ನಾಲ್ವರು ಕುಟುಂಬಸ್ಥರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ನಗರದ ಕಾರಂಜಿಕಟ್ಟೆಯ 4ನೇ ಕ್ರಾಸ್ ನಿವಾಸಿಗಳಾದ ಮುನಿಯಪ್ಪ (70), ನಾರಾಯಣಮ್ಮ (65), ಬಾಬು (45), ಗಂಗೋತ್ರಿ (17) ಹಾಗೂ ಪುಷ್ಪಾ (35) ಮೃತರು.
ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಹಾಗೂ ಸುಮಿತ್ರ ಎಂಬುವರು ಪ್ರೀತಿಸಿ ಮನೆಯವರಿಗೆ ತಿಳಿಯದೆ ಮದುವೆಯಾಗಿದ್ದರು ಈನಡುವೆ ಅವರಿಗೆ ಒಂದು ಹೆಣ್ಣು ಮಗುವಾಗಿತ್ತು. ಆಗ, ಮನೆಯವರಿಗೆ ವಿಷಯ ತಿಳಿದರೆ ಅನ್ನೋ ಭಯದಲ್ಲಿ ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಅನ್ನೋರಿಗೆ ಸತ್ಯ ಹಾಗೂ ಸುಮಿತ್ರ ಅ.18ರಂದು ಕೊಟ್ಟಿದ್ದರು.
ಈ ವೇಳೆ ಪುಷ್ಪಾ ಎಂಬಾಕೆ ಹೋಗಿದ್ದರು ಅನ್ನೋ ಕಾರಣಕ್ಕೆ ಮಗು ಅಪಹರಣ ಪ್ರಕರಣದಲ್ಲಿ ಪುಷ್ಪಾರ ಹೆಸರಿದೆ. ಅಲ್ಲದೆ ಅವರೆಲ್ಲರೂ ಕೋಲಾರಮ್ಮ ದೇವಾಲಯದ ಬಳಿ ಕುಳಿತು ಮಾತನಾಡಿ ಮಗು ತೆಗೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಈ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಹಾಗಾಗಿ ಪೊಲೀಸರು ಪುಷ್ಪಾರನ್ನು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು.
ಅಲ್ಲದೆ ಮಗುವನ್ನು ತಂದು ಕೊಡುವಂತೆ ಸಮಯ ಕೊಟ್ಟು ಕಳಿಸಿದ್ದರು. ಆದರೆ ಗೀತಾ ತಲೆ ಮರೆಸಿಕೊಂಡು ಮಗುವನ್ನು ಪುಷ್ಪಾಳಿಗೆ ಕೊಟ್ಟಿದ್ದೆ. ನನಗೇನು ಗೊತ್ತಿಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಳು. ಪ್ರಕರಣ ನೇರ ಪುಷ್ಪಾಳ ಮೇಳೆ ತಿರುಗುತ್ತದೆ ಎಂದು ಹೆದರಿಕೊಂಡು ಇಡೀ ಕುಟುಂಬಸ್ಥರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣದ ತನಿಖೆ ವೇಳೆ ಕೇವಲ 9 ದಿನಗಳ ಮಗುವನ್ನು ಈ ದಂಪತಿ ಹೇಗೆ ಕೊಡಲು ಸಾಧ್ಯ? ಕೊಟ್ಟ ನಂತರ ಒಂದೇ ಒಂದು ದಿನವೂ ಮಗುವಿನ ಯೋಗಕ್ಷೇಮ ವಿಚಾರಿಸಲು ಬಂದಿಲ್ಲ, ಹಾಗೊಂದು ವೇಳೆ ಮಗುವನ್ನು ನೋಡಲು ಬಂದಿದ್ದರೆ ಮಗುವಿನ ಎಲ್ಲ ವಿಚಾರ ತಿಳಿಯುತ್ತಿತ್ತು. ಆದರೆ ಮಗುವನ್ನು ಈ ದಂಪತಿಗಳೇ ಮಾರಾಟ ಮಾಡಿದ್ದಾರಾ? ಅನ್ನೋ ಅನುಮಾನ ಮೂಡಿದೆ.
ಅಲ್ಲದೇ ಇದೇ ವಿಚಾರವಾಗಿ ಪೊಲೀಸರು ಠಾಣೆಗೆ ಕರೆಸಿ ಕಿರುಕುಳ ನೀಡಿದ್ದರಿಂದಲೇ ಮನನೊಂದು.. ಬೇಸತ್ತ ಮನೆಯ ಐದೂ ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮೊದಲು ಪುಷ್ಪಾ, ಆನಂತ್ರ ನಿನ್ನೆ ಮೂವರು, ಇಂದು ಒಬ್ಬರು ಸೇರಿದಂತೆ ಐವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದ ನಂತ್ರ ಪೊಲೀಸರು ಹಾಗೂ ಗೀತಾ ಬಗ್ಗೆ ಉಲ್ಲೇಖಿಸಿ, ಮೃತ ಪುಷ್ಪಾ ಬರೆದಿರುವಂತ ಡೆತ್ ನೋಟ್ ದೊರೆತಿದೆ.