ಹಣ್ಣು ತಿಂದವರು ಯಾರೋ, ಸಿಪ್ಪೆ ತಿಂದವರು ಯಾರೋ, ಮೂತಿಗೆ ಒರೆಸಿದವರು ಯಾರೋ.. | ಜನತಾ ನ್ಯೂಸ್
ಬೆಂಗಳೂರು : ಹಣ್ಣು ತಿಂದವನು ಯಾರೋ, ಸಿಪ್ಪೆ ತಿಂದವನು ಯಾರೋ. ಹಾದಿ ತಪ್ಪಿಸುವ ಕೆಲಸ ಬೇಡ ಎಂದು ಕಾಂಗ್ರೆಸ್ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ಗೆ ಡ್ಯಾಮೇಜ್ ಮಾಡುವ ಪ್ರಯತ್ನ ಆಗುತ್ತಿದೆ. ಆದ್ರೆ ಕಾಂಗ್ರೆಸ್ನವರನ್ನು ಡ್ಯಾಮೇಜ್ ಮಾಡೋಕೆ ಆಗಲ್ಲ. ನಾವು ಮಾಹಿತಿ ಕಲೆ ಹಾಕ್ತಾ ಇದ್ದೇವೆ. ಕಾಂಗ್ರೆಸ್ ನಾಯಕರಿದ್ರೆ ಲೇಟ್ ಯಾಕೆ ಮಾಡ್ತಾ ಇದ್ದಾರೆ, ಅರೆಸ್ಟ್ ಮಾಡ್ಲಿ ತಡ ಮಾಡ್ತಿರೋದು ಯಾಕೆ. ಟೈಮ್ ಯಾಕೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು. ಹಣ್ಣು ತಿಂದವನು ಯಾರೋ, ಸಿಪ್ಪೆ ತಿಂದವನು ಯಾರೋ. ಹಾದಿ ತಪ್ಪಿಸುವ ಕೆಲಸ ಬೇಡ ಎಂದು ಕಾಂಗ್ರೆಸ್ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದರು.
ಬಿಟ್ ಕಾಯಿನ್ ಪ್ರಕರಣ ಇಡೀ ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪ್ರಕರಣದ ವಿಚಾರಣೆಯನ್ನು ಇಡಿಗೆ ಹಸ್ತಾಂತರ ಮಾಡಲಾಗಿದೆ ಎಂಬುದು ಸಿಎಂ ಹೇಳಿಕೆ. ಈಗ ಅವರು ಕೆಲವು ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಿದ್ದಾರೆ. ಹಳೇ ಪ್ರಕರಣವನ್ನು ಉಲ್ಲೇಖಿಸಿ ದಾರಿ ತಪ್ಪಿಸುತ್ತಿದ್ದಾರೆ. ಹಲವು ವದಂತಿಗಳನ್ನು ಹರಿಯಬಿಡಲಾಗಿದೆ ಎಂದು ಹೇಳಿದರು..
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ.. ಎಂಬ ವದಂತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲು ತಡ ಮಾಡುತ್ತಿರುವುದೇಕೆ? ಕೂಡಲೇ ಬಂಧಿಸಲಿ. ಸಮಯ ವ್ಯರ್ಥ ಮಾಡುವುದೇಕೆ? ಅವರು ಯಾವ ರೀತಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಿ. ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದರು.
ಸಿಎಂಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಪ್ರಧಾನಿ ಹೇಳಿದ್ದಾರೆಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಬಹಳ ಸಂತೋಷ. ಹಗರಣದಲ್ಲಿ ಏನಿದೆ ಅಂತ ಸಿಎಂ ಬಿಚ್ಚಿಡಲಿ. ಕೆಲವು ಹೇಳೋದು ಉಳಿದದ್ದು ಹೇಳದೇ ಇರೋದು ಮಾಡಬಾರದು ಸಿಎಂ. ಸಚಿನ್ ಮಾಮನಿ ಪಿಎಂಗೆ ಬರೆದ ಪತ್ರದಲ್ಲಿ ಎಲ್ಲ ಉಲ್ಲೇಖ ಮಾಡಿದ್ದಾರೆ. ತನಿಖೆ ಮಾಡಬೇಕಲ್ಲ ಇವರು? ಯಾರಿದಾರೆ, ಯಾರಿಲ್ಲ, ಎಲ್ಲಿ ಹಗರಣ ನಡೀತು ಅಂತ ಹೇಳಲಿ ಎಂದು ಸವಾಲೆಸೆದರು.