ಕೆನಡಾದಿಂದ ಮರಳಿ ಪಡೆಯಲಾದ ಮಾತಾ ಅನ್ನಪೂರ್ಣ ದೇವಿಯ ವಿಗ್ರಹದ ದೆಹಲಿಯಿಂದ ಕಾಶಿಗೆ 4 ದಿನದ ಯಾತ್ರೆ ಆರಂಭ | ಜನತಾ ನ್ಯೂಸ್
ನವದೆಹಲಿ : ಶತಮಾನದ ಹಿಂದೆ ಕಳವಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ವಶಪಡಿಸಿಕೊಳ್ಳಲಾಗಿದೆ, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆ ಇಂದು ಆರಂಭಗೊಂಡಿದೆ.
ಕೆನಡಾದಿಂದ ಮರಳಿ ಪಡೆಯಲಾದ ಅನ್ನಪೂರ್ಣ ದೇವಿಯ ವಿಗ್ರಹವು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ತನ್ನ ಪ್ರಯಾಣಕ್ಕೆ ಇಂದು ಚಾಲನೆ ನೀಡಲಾಗಿದೆ. ನವೆಂಬರ್ 15ರಂದು ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕಳವಾಗಿದ್ದ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಇತ್ತೀಚೆಗೆ ಕೆನಡಾದಿಂದ ಹಿಂಪಡೆಯಲಾಗಿದೆ. ನವೆಂಬರ್ 15 ರಂದು ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಭಾರತ ಸರ್ಕಾರವು ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ತಾಯಿ ಅನ್ನಪೂರ್ಣ ವಿಗ್ರಹವನ್ನು ಹಸ್ತಾಂತರಿಸಲಿದೆ, ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಇಂದು ದೆಹಲಿಯಲ್ಲಿ ತಿಳಿಸಿದ್ದಾರೆ.
ಇಂದು, ಅನ್ನಪೂರ್ಣ ಮಾತೆಯ ವಿಗ್ರಹವನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತದೆ. ಯುಪಿ ಸರ್ಕಾರವು ವಾರಣಾಸಿಗೆ 4 ದಿನಗಳ ಮಾತಾ ಅನ್ನಪೂರ್ಣ ದೇವಿ ಯಾತ್ರೆಯನ್ನು ಕೈಗೊಳ್ಳಲಿದೆ. ನವೆಂಬರ್ 15ರಂದು, ಸಿಎಂ ಆದಿತ್ಯನಾಥ್ ಅವರಿಂದ ವಿಶ್ವನಾಥ ದೇವಾಲಯದಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುವುದು, ಎಂದು ಯುಪಿ ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್.ಕೆ.ಅವಸ್ತಿ ದೆಹಲಿಯಲ್ಲಿ ತಿಳಿಸಿರುವುದಾಗಿ ಎಏನ್ಐ ವರದಿಮಾಡಿದೆ.