ಕ್ಷುಲ್ಲಕ ವಿಚಾರಕ್ಕೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ | ಜನತಾ ನ್ಯೂಸ್
ಚಿತ್ರದುರ್ಗ : ಮನೆ ಮುಂದೆ ನಾಯಿ ಬಹಿರ್ದೆಸೆ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟದಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕಟ್ಟಿಗೆಯಿಂದ ತಲೆಗೆ ಹೊಡೆದು ಜಾಲಿಕಟ್ಟೆ ಗ್ರಾಮದ ನಿವಾಸಿ ಮಹಾಂತೇಶ(23) ನನ್ನು ಹತ್ಯೆ ಮಾಡಲಾಗಿದೆ.
ಮಹಂತೇಶ್ ಮನೆ ಬಳಿ ನಿತ್ಯ ಸ್ವಾಮಿ ಎಂಬ ವ್ಯಕ್ತಿ ನಾಯಿ ಕರೆದೊಯ್ಯುತ್ತಿದ್ದ. ನಾಯಿ ಗಲೀಜು ಮಾಡುತ್ತದೆ ಎಂದು ಮಹಾಂತೇಶ ಆಕ್ಷೇಪ ಮಾಡಿದ್ದು, ಮಹಾಂತೇಶ ಮತ್ತು ಸ್ವಾಮಿ ನಡುವೆ ಗಲಾಟೆಯಾಗಿದೆ.
ಜಗಳ ಮಾಡುತ್ತಿದ್ದಾಗ ಸ್ವಾಮಿ ಮರದ ತುಂಡಿನಿಂದ ಜಾಲಿಕಟ್ಟೆ ನಿವಾಸಿ ಮಹಂತೇಶ್ (23) ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೀಗಾಗಿ ಗಂಭೀರವಾಗಿ ಗಾಯಗೊಂಡ ಮಹಂತೇಶ್ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಕ್ಷುಲ್ಲಕ ವಿಚಾರ ಜಗಳಕ್ಕೆ ಕಾರಣವಾಗಿ ಮಹಂತೇಶ ಎಂಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.