ಟಿಎಂಸಿ ಪ.ಬಂ.ವನ್ನು ಲೂಟಿ ಮಾಡಿದ ಹಣ ತಂದು ದೆಹಲಿಯಲ್ಲಿ ರಾಜಕೀಯ ವ್ಯಾಪಾರ ನಡೆಸುತ್ತಿದೆ - ಕಾಂಗ್ರೆಸ್ | ಜನತಾ ನ್ಯೂಸ್
ನವದೆಹಲಿ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತ್ರತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಶ್ಚಿಮ ಬಂಗಾಳವನ್ನು ಲೂಟಿ ಮಾಡಿದ ಹಣ ತಂದು ದೆಹಲಿಯಲ್ಲಿ ರಾಜಕೀಯ ವ್ಯಾಪಾರ ನಡೆಸುತ್ತಿದೆ, ಎಂದು ಕಾಂಗ್ರೆಸ್ ಇಂದು ಆರೋಪಿಸಿದೆ.
ಕಾಂಗ್ರೆಸ್ ನ ವಿವಿಧ ಮುಖಂಡರು ಪಕ್ಷ ತೊರೆದು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನ ನಾಯಕ ಅಧೀರ್ ರಂಜನ್ ಚೌಧರಿ ಅವರು, ಅವಕಾಶವಾದಿ ರಾಜಕಾರಣಕ್ಕೆ ಇದೊಂದು ಉದಾಹರಣೆ ಅಷ್ಟೇ. ಈ ಜನರು ಇಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಟಿಎಂಸಿ ಪಶ್ಚಿಮ ಬಂಗಾಳವನ್ನು ಲೂಟಿ ಮಾಡಿ ಸಾಕಷ್ಟು ಹಣ ತಂದು ದೆಹಲಿಯಲ್ಲಿ ರಾಜಕೀಯ ವ್ಯಾಪಾರ ನಡೆಸುತ್ತಿದೆ, ಎಂದು ಟಿಎಂಸಿ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಕಾಂಗ್ರೆಸ್ ನ ಮಾಜಿ ಸಂಸದ ಸೇರಿದಂತೆ ಇಬ್ಬರು ಮುಖಂಡರು ನವದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಮಾಜಿ ವಿಶ್ವಕಪ್ ವಿಜೇತ ಮತ್ತು ಸಂಸದ ಎಸ್. ಕೀರ್ತಿ ಆಜಾದ್ ಅವರು ಅಧಿಕೃತವಾಗಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ಸೇರಿದ್ದಾರೆ. ಕಾಂಗ್ರೆಸ್ ಮಾಜಿ ನಾಯಕ ಅಶೋಕ್ ತನ್ವಾರ್ ಕೂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದರು.
ಇನ್ನೂ, ಮಾಜಿ ಜೆಡಿಯು ಮುಖಂಡ ಪವನ್ ವರ್ಮಾ ಅವರು ಸಹ ಇದೇ ಸಂದಭದಲ್ಲಿ ನವದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.