26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂಸ್
ನವದೆಹಲಿ : ಭಾರತದ ಕರಾಳ ದಿನಗಳಲ್ಲಿ ಒಂದಾದ ಮುಂಬೈ ಮೇಲಿನ 26/11 ದಾಳಿಯ ನಂತರ ಮನಮೋಹನ್ ಸಿಂಗ್ ಸರ್ಕಾರವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಸೇಡು ತೀರಿಸಿಕೊಳ್ಳಬೇಕಾಗಿತ್ತು, ಎಂದು ಹಿರಿಯ ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಅವರು ತಮ್ಮ ಹೊಸ ಪುಸ್ತಕದಲ್ಲಿ ತಮ್ಮ ಮನದಾಳ ಹೇಳಿದ್ದಾರೆ. ಆದರೆ, ಪಕ್ಷದ ಹಿರಿಯ ಮುಖಂಡರ ಈ ಹೇಳಿಕೆ ಪಕ್ಷದ ಹೈಕಮಾಂಡ್ ನ್ನು ಕೆರಳಿಸಿದ್ದು, ಸಧ್ಯದಲ್ಲೇ ತಿವಾರಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಾದ್ಯತೆಗಳಿವೆ ಎನ್ನಲಾಗಿದೆ.
"10 ಫ್ಲ್ಯಾಶ್ ಪಾಯಿಂಟ್ಸ್; 20 ಇಯರ್ಸ್ - ನ್ಯಾಶನಲ್ ಸೆಕ್ಯುರಿಟಿ ಸಿಚುಯೇಷನ್ಸ್ ಡೆಟ್ ಇಂಪ್ಯಾಕ್ಟ್ಎಡ್ ಇಂಡಿಯಾ" ಎಂಬ ತಮ್ಮ ಪುಸ್ತಕದಲ್ಲಿ, ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ತಿವಾರಿ, 166 ಜನರನ್ನು ಬಲಿ ತೆಗೆದುಕೊಂಡಂತಹ, ಭಾರತದ ನೆಲದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗೆ ಯುಪಿಎ ಸರ್ಕಾರ "ಚಲನಾತ್ಮಕ ಪ್ರತಿಕ್ರಿಯೆ"ಯ ಕ್ರಮ ಕೈಗೊಳ್ಳಲಿಲ್ಲ, ಎಂದು ತೀವ್ರವಾಗಿ ಟೀಕಿಸಿದರು.
"ಕೆಲವೊಂದು ಸಮಯ ಬರುತ್ತದೆ, ಅದರಲ್ಲಿ ಶಬ್ದಕ್ಕಿಂತ ದೊಡ್ಡದಾಗಿ ಕ್ರಮದ ಅಗತ್ಯತೆ ಇರುತ್ತದೆ. 26/11 ದಾಳಿಯ ಸಮಯವೂ ಇಂತಹದೊಂದು ಸಮಯವಾಗಿದ್ದು, ಅಲ್ಲಿ ಇದನ್ನು ಮಾಡಬೇಕಿತ್ತು. ನನ್ನ ಅಭಿಪ್ರಾಯದ ಪ್ರಕಾರ, ಭಾರತ ಚಲನಾತ್ಮಕ ಪ್ರತಿಕ್ರಿಯೆಯ ಕ್ರಮ ಕೈಗೊಳ್ಳಬೇಕಿತ್ತು", ಎಂದು ಬರೆದಿರುವ ತಮ್ಮ ಪುಸ್ತಕದ ಪುಟಗಳ ಚಿತ್ರವನ್ನು ತಿವಾರಿ ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ, ಬಿಜೆಪಿ ಸಹ ಯುಪಿಎ ಸರ್ಕಾರದ ನೇತ್ರತ್ವ ಹೊಂದಿದ್ದ ಕಾಂಗ್ರೆಸ್ ವಿರುದ್ಧದ ತನ್ನ ಆರೋಪವನ್ನು ಪುನಃರುಚ್ಚರಿಸಿದ್ದು, ಕಾಂಗ್ರೆಸ್ - ನೇತೃತ್ವದ ಯುಪಿಎ ಸರ್ಕಾರ ದಾಳಿಗೆ ನಡೆಸಿದ ಪಾಕಿಸ್ತಾನದ ಕುರಿತು ಮೃದು ದೋರಣೆ ಹೊಂದಿತ್ತು, ಎಂದು ಆರೋಪಿಸಿದೆ.
26/11 ದಾಳಿಗೆ ಯುಪಿಎ ಸರ್ಕಾರದ ಪ್ರತಿಕ್ರಿಯೆ ಕುರಿತು ಮನೀಶ್ ತಿವಾರಿ ಅವರ ಪುಸ್ತಕದ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ಲೋಕಸಭಾ ನಾಯಕ ಅಧೀರ್ ರಂಜನ್ ಚೌದರಿ ಅವರು, ಲಡಾಖ್ನಲ್ಲಿ ನಮ್ಮ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಮತ್ತು ಅರುಣಾಚಲ ಪ್ರದೇಶದಲ್ಲಿ ಹಳ್ಳಿಗಳನ್ನು ನಿರ್ಮಿಸಿದ ಚೀನಾದ ಮೇಲೆ ಅವರು ಹೆಚ್ಚು ಗಮನಹರಿಸಬೇಕು. ಅವರಿಗೆ ಈಗ ಪ್ರಜ್ಞೆ ಬಂದಂತಿದೆ. ಆವಾಗಿನ ಸಮಯದಲ್ಲಿ ಅವರು ಅದರ ಬಗ್ಗೆ ಏಕೆ ಮಾತನಾಡಿರಲಿಲ್ಲ", ಎಂದು ಪ್ರಶ್ನಿಸಿದ್ದಾರೆ.
Happy to announce that my Fourth Book will be in the market shortly - '10 Flash Points; 20 Years - National Security Situations that Impacted India'. The book objectively delves into every salient National Security Challenge India has faced in the past two decades.@Rupa_Books pic.twitter.com/3N0ef7cUad
— Manish Tewari (@ManishTewari) November 23, 2021