ಕಾಶಿ ನಿರ್ಮಾಣ ಕಾಮಗಾರಿ ಕೆಲಸಗಾರರೊಂದಿಗೆ ಭೋಜನ ಸವಿದ ಪ್ರಧಾನಿ ಮೋದಿ | ಜನತಾ ನ್ಯೂಸ್
ಲಕ್ನೋ : ಕಾಶಿ ವಿಶ್ವನಾಥ ಧಾಮ ಕಾರಿಡಾರ್ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೋಜನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಸಹ ಈ ಭೋಜನಕೂಟದಲ್ಲಿ ಪಾಲ್ಗೊಂಡರು.
ಇದಕ್ಕೂ ಮೊದಲು ಕಾಶಿ ವಿಶ್ವನಾಥ ಧಾಮ ಕಾರಿಡಾರ್ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪವೃಷ್ಟಿ ಮಾಡುವ ಮೂಲಕ ಅಭಿನಂದಿಸಿದರು.
ಇಂದು ಮಧ್ಯಾಹ್ನ ವಾರಣಾಸಿ ತಲುಪಿದ ಪ್ರಧಾನಿ ಮೋದಿ ಅವರು ಗಂಗಾ ಸ್ನಾನ ಮಾಡಿದ ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದೆ ಯತ್ರಾರ್ತಿಗಳು ಅನುಭವಿಸುತ್ತಿದ್ದ ಅನನುಕೂಲತೆಗಳನ್ನೂ ಹಾಗೂ ನೂತನ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದು, ಗ್ರಂಥ, ಪುರಾಣದಲ್ಲಿ ಕಾಶಿ ವೈಭವದ ಕುರಿತು ಬರೆದಿರುವುದನ್ನು ಹೇಳಿದರಲ್ಲದೇ, ಕಾಶಿಯನ್ನು ಪುನಃಸ್ಥಾಪಿಸಲು ಶ್ರಮಿಸಿದ ಕಾಶಿ ವಾಸಿಗಳಿಗೆ ಅಭಿನಂದಿಸಿದರು.
ತಮ್ಮ ಭಾಷಣದಲ್ಲಿ ದಾಳಿಕೋರರ ಬಗ್ಗೆ ಹೇಳಿದ ಪ್ರಧಾನಿ ಮೋದಿ, ಔರಂಗಜೇಬ್ ನ ಆತಂಕದ, ಅತ್ಯಾಚಾರಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಆತನು ದೇಶದ ಸಂಸ್ಕೃತಿ, ಸಭ್ಯತೆಯನ್ನು ಕತ್ತಿಯ, ಕಟ್ಟರತೆಯ ಬಲದ ಮೇಲೆ ಬದಲಾಯಿಸಲು ಯತ್ನಿಸಿದನು. ಆದರೆ ಇಲ್ಲಿಯ ಮಣ್ಣಿನ ಮಹಿಮೆಯೇ ಬೇರೆ. ಇಲ್ಲಿ ಔರಂಗಜೇಬ್ ಬಂದರೆ, ಶಿವಾಜಿ ಕೂಡ ಎದ್ದು ನಿಲ್ಲುತ್ತಾರೆ, ಎಂದು ಹೇಳಿದ್ದಾರೆ.