ಜೀವಂತ ಗಂಡುಗಳಾಗಿದ್ದರೆ ಹಗಲು ಹೊತ್ತು ಪ್ರತಿಮೆ ಮುಟ್ಟಲಿ ನೋಡೋಣ | ಜನತಾ ನ್ಯೂಸ್
ಬೆಳಗಾವಿ : ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಹೇಡಿಗಳನ್ನು ಗಡಿಪಾರು ಮಾಡುವುದು ಮಾತ್ರವಲ್ಲ, ಗುಂಡಿಕ್ಕಿ ಕೊಲ್ಲಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶಭರಿತರಾಗಿ ಆಗ್ರಹಿಸಿದರು.
ಎಂಇಎಸ್ ಎನ್ನುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಅದು ಮಹಾರಾಷ್ಟ್ರ ಹೇಡಿಗಳ ಸಮಿತಿ. ರಾತ್ರಿ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಜೀವಂತ ಗಂಡುಗಳಾಗಿದ್ದರೆ ಹಗಲು ಹೊತ್ತು ಪ್ರತಿಮೆ ಮುಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಾನಿ ಮಾಡಿದ ಹೇಡಿಗಳನ್ನು ಗಡಿಪಾರು ಮಾಡುವುದು ಮಾತ್ರವಲ್ಲ, ಗುಂಡಿಕ್ಕಿ ಕೊಲ್ಲಬೇಕು .ಕನ್ನಡಿಗರ ಕೈಯಲ್ಲಿ ಸಿಕ್ಕರೆ ಚಿಂದಿಯಾಗಿ ಹೋಗುತ್ತಾರೆ. ಕನ್ನಡ ಧ್ವಜವನ್ನು ಸುಟ್ಟು ಹಾಕಿದ್ದಾರೆ ಎಂದು ಗೊತ್ತಾಗಿಯೂ ಮಹಾರಾಷ್ಟ್ರದ ಸಿಎಂ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದೊಂದು ವ್ಯವಸ್ಥಿತ ಪಿತೂರಿ. ಈ ಕೃತ್ಯ ಎಸಗಿದ ದೇಶದ್ರೋಹಿಗಳ ಹಿಂದೆ ಯಾರು ಯಾರು ಇದ್ದಾರೆ ಎಂಬುದರ ತನಿಖೆ ಆಗಬೇಕು. ಇದರ ಹಿಂದೆ ಯಾರು ಯಾರು ಇದ್ದಾರೆ ಎನ್ನುವು ಇದ್ದಾರೆ ಎನ್ನುವುದನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.