ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ: ಯತ್ನಾಳ್ | ಜನತಾ ನ್ಯೂಸ್
ಬೆಳಗಾವಿ : ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ಸಚಿವ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟಾಂಗ್ ನೀಡಿದ್ದಾರೆ.
ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ದೊಡ್ಡ, ದೊಡ್ಡ ಸಂಧಾನ ಮಾಡುತ್ತಿರುವುದು ನಿಜ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂದು ನನಗೆ ಆಮಿಷ ಒಡ್ಡುತ್ತಿದ್ದಾರೆ. ಆದರೆ ಇಂತವರನ್ನು ಒಪ್ಪಿಕೊಳ್ಳುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಆಗುತ್ತೇನೆ ಎಂದು ಯಾರ್ಯಾರೋ ಹಗಲುಗನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಡುತ್ತಾರೆ. ಅವರ ಆಸೆಗಳು ಈಡೇರುವುದಿಲ್ಲ. ಸದ್ಯ ಸಿಎಂ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.