ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ | ಜನತಾ ನ್ಯೂಸ್
ಬೆಂಗಳೂರು : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ. ಮೊದಲ ಅಧಿವೇಶನದಲ್ಲೇ ಮಸೂದೆ ಹಿಂಪಡೆದು ಎಸೆಯುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಸದನದಲ್ಲಿ ನೂರಕ್ಕೆ ನೂರರಷ್ಟು ಈ ಕಾನೂನನ್ನು ವಾಪಸ್ ಪಡೆದು ಎಸೆಯುತ್ತೇವೆ ಎಂದು ಹೇಳಿದರು.
ಒಂದು ಹುಡುಗ ಹುಡುಗಿ ಮದುವೆ ಆಗುವುದು ಮತಾಂತರನಾ..? ಲವ್ ಮಾಡಿ ಮದುವೆ ಆಗೋದ್ ಅವರ ಹಕ್ಕು. ಇವರು ತಂದಿರೋದ್ ಸಂವಿಧಾನದ ಬಾಹಿರ. ಇವರ ಉದ್ದೇಶ ವೋಟ್ ಪಡೆಯೋದ್ ಅಷ್ಟೆ. ಭಾವನಾತ್ಮಾಕ ವಿಷಯಗಳನ್ನ ಇಟ್ಕೊಂಡು ಜನರ ದಾರಿ ತಪ್ಪಿಸುತ್ತಾರೆ. ಜನರನ್ನ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಬಿಜೆಪಿ ಅಂದರೆ ಬರೀ ಸುಳ್ಳು. ವಿಧೇಯಕದ ಡ್ರಾಫ್ಟ್ಗೆ ನಾನು ಸಹಿ ಮಾಡಿದ್ದನ್ನೇ ಬಿಜೆಪಿ ಅಜೆಂಡಾ ಮಾಡಿಕೊಂಡಿದೆ. ಇದು ಹುಟ್ಟಿದ್ದು 2009ರಲ್ಲಿ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ. ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ ಮುಂದೆ ತನ್ನಿ ಅಂದಿದ್ದು ನಿಜ. ಆದರೆ, ಬಳಿಕ ನಾನು ಆಗಿನ ಸಮಾಜಕಲ್ಯಾಣ ಸಚಿವ ಆಂಜನೇಯಗೆ ಹೇಳಿ ಅದನ್ನ ಸ್ಟಾಪ್ ಮಾಡುವಂತೆ ಹೇಳಿದ್ದೆ.
ನಾನು ಹೇಳಿದ ತಕ್ಷಣ ಆಂಜನೇಯ ಇದು ಅಗತ್ಯವಿಲ್ಲ ಎಂದು ಫೈಲ್ನಲ್ಲಿ ಬರೆದು ಕ್ಯಾಬಿನೆಟ್ಗೆ ತಂದಿಲ್ಲ. ಅದು ಅಲ್ಲಿಗೆ ಸತ್ತು ಹೋಗಿತ್ತು. ಬಿಜೆಪಿಯವರು ವಾಸ್ತವ ಹೇಳ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.