ಪ್ರಧಾನಿ ಭದ್ರತೆ ಕುರಿತಂತೆ ಕಾಂಗ್ರೆಸ್ ಅಪರಾಧ ಖಂಡಿಸಿ ರಾಷ್ಟ್ರಾಧ್ಯಂತ ಪಂಜಿನ ಮೆರವಣಿಗೆ - ಬಿಜೆಪಿ ಯುವ ಮೋರ್ಚಾ | ಜನತಾ ನ್ಯೂಸ್
ನವದೆಹಲಿ : ದೇಶದ ಪ್ರಧಾನಿ ಭದ್ರತೆಯ ಕುರಿತಂತೆ ನಿನ್ನೆ ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಡವಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ದೇಶಾದ್ಯಂತ ಪಂಜಿನ ಮೆರವಣಿಗೆ ನಡೆಸಲು ಮುಂದಾಗಿದೆ.
ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ಕುರಿತು ಅವರು, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ನಿನ್ನೆ ಪ್ರಧಾನಿಯ ಪ್ರಾಣಕ್ಕೆ ಅಪಾಯ ತಂದಿದೆ. ಇದು ಪ್ರಧಾನಿ ಕಚೇರಿಯ ಮೇಲೆ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೇಲೆಯೇ ದಾಳಿಯಾಗಿದೆ. ಈ ಅಪರಾಧ ಕೃತ್ಯವನ್ನು ಬಿಜೆವೈಎಂ ಬಲವಾಗಿ ಖಂಡಿಸುತ್ತದೆ. ಬಿಜೆವೈಎಂ ಇಂದು ಸಂಜೆ 6 ಗಂಟೆಗೆ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಮಾಶಾಲ್ ಮೆರವಣಿಗೆಗಳನ್ನು ನಡೆಸಲಿದೆ, ಎಂದು ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.
Congress deliberately put life of PM at risk yesterday
— Tejasvi Surya (@Tejasvi_Surya) January 6, 2022
This was attack not only on office of PM but on democracy itself.
BJYM strongly condemns this criminal act
BJYM will hold large Mashaal Marches at 6PM today evening at all districts across country.#BharatStandsWithModiJi