ಅಧಿಕಾರದಲ್ಲಿದ್ದಾಗ ನಿಮ್ಮ ಪೌರುಷ, ಗಂಡಸ್ತನ ಎಲ್ಲಿ ಹೋಗಿತ್ತು? | ಜನತಾ ನ್ಯೂಸ್
ಬೆಂಗಳೂರು : ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ, ಪೌರುಷ ಎಲ್ಲಿ ಹೋಗಿತ್ತು ಎಂದು ಹೇಳುವ ಮೂಲಕ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರು, ಇದು ರಾಜಕೀಯ ಪ್ರೇರಿತ ಪಾದಯಾತ್ರೆ. ಇವರು ಜನರ ಅಭಿವೃದ್ಧಿ, ಹಿತದೃಷ್ಟಿಯಿಂದ ಪಾದಯತ್ರೆ ಮಾಡುತ್ತಿಲ್ಲ. ಇವರು ಅಧಿಕಾರದಲ್ಲಿದ್ದಾಗ ಏನ್ ಮಾಡಿದ್ದರು, ಡಿಕೆಶಿಯವರೇ ಎಷ್ಟು ವರ್ಷ ಸಚಿವರಾಗಿದ್ದರು.
ಈಗ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿಲ್ವಾ? ನಿಮ್ಮ ಕಾಲದಲ್ಲಿ ಯಾಕೆ ಅನುಷ್ಠಾನಕ್ಕೆ ತರಲಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದರು. ನೀವು ಏನೇ ಮಾಡಿದ್ರೂ ಮುಂದೆ ಅಧಿಕಾರಕ್ಕೆ ಬರೋದಿಲ್ಲ ಎಂದರು.
ನಮ್ಮ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಬದ್ಧವಿದೆ. ನಿಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ.? ಅಧಿಕಾರದಲ್ಲಿದ್ದಾಗ ಗಂಡಸ್ತನ ಎಲ್ಲಿ ಹೋಗಿತ್ತು? ಈಗ ತಾಕತ್ತು, ಪೌರುಷ, ಗಂಡಸ್ತನ ಅದು ಇದು ಮಾತು ಯಾಕೆ? ಅಧಿಕಾರದಲ್ಲಿದ್ದಾಗ ಪೌರುಷ ಎಲ್ಲಿ ಹೋಗಿತ್ತು? ಗಂಡಸ್ತನ ಎಲ್ಲಿ ಹೋಗಿತ್ತು. ಈಗ ಗಂಡಸ್ತನದ ಬಗ್ಗೆ ಮಾತನಾಡುತ್ತಿದ್ದೀರಿ. ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೊರಿಸಲಿ.