2011 ಯುಪಿಎ ಸರ್ಕಾರದ ಸಂದರ್ಭದಲ್ಲಿ ರಕ್ಷಣಾ ಒಪ್ಪಂದಕ್ಕೆ 75ಕೋಟಿ ಕಮಿಷನ್ - ಬಿಜೆಪಿ ಆರೋಪ | ಜನತಾ ನ್ಯೂಸ್
ನವದೆಹಲಿ : ಹಿಂದಿನ ಯುಪಿಎ ಸರ್ಕಾರದ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ವಾಡ್ರಾ ಅವರ ಪತಿ ರಾಬರ್ಟ್ ವಾಡ್ರಾ ಅವರ ಸ್ನೇಹಿತನ ಮೂಲಕ ರಕ್ಷಣಾ ಸರಬುರಾಜು ಕಂಪನಿಯಿಂದ ಕಾಂಗ್ರೆಸ್ 75 ಕೋಟಿ ರೂಪಾಯಿ ಕಮಿಷನ್ ಪಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಅನೇಕ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಇಂದು ಪತ್ರಿಕಾಘೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಗೌರವ್ ಬಾಟಿಯಾ ಅವರು, ರಾಬರ್ಟ್ ವಾದ್ರಾ ಅವರ ಆತ್ಮೀಯ ಸ್ನೇಹಿತ ಸಂಜಯ್ ಭಂಡಾರಿ ಲಂಡನ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮೊಕದ್ದಮೆಯಲ್ಲಿ, ಅವರು 2011 ರಲ್ಲಿ, ಅವರು ಮತ್ತು ಯುದ್ಧ ವಿಮಾನಗಳನ್ನು ನವೀಕರಿಸಲು ಕೆಲಸ ಮಾಡುವ ಥೇಲ್ಸ್ ಕಂಪನಿಯನ್ನು ಒಪ್ಪಿಕೊಂಡಿದ್ದಾರೆ.
ದಾಖಲಾದ ದಾವೆಯಲ್ಲಿ, ಸಂಜಯ್ ಭಂಡಾರಿ ಮತ್ತು ಥೇಲ್ಸ್ ಕಂಪನಿ ನಡುವೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಸಂಜಯ್ ಭಂಡಾರಿ ಅವರು ಸುಮಾರು 170 ಕೋಟಿ ಲಂಚ ಪಡೆಯಬೇಕಾಗಿತ್ತು, ಎಂದು ಹೇಳಲಾಗಿದೆ. ಬೆಳಕಿಗೆ ಬಂದಿರುವ ಸತ್ಯದ ಪ್ರಕಾರ, ಯುಪಿಎ ಸರ್ಕಾರದ ಅವಧಿಯಲ್ಲಿ ರೂ.75 ಕೋಟಿ ಸಂಜಯ್ ಭಂಡಾರಿ ಅವರಿಗೆ ದೊರತಿದೆ.
ಈ ಸುದ್ದಿ ಬಂದ ನಂತರ ಎಲ್ಲೆಲ್ಲಿ ಭ್ರಷ್ಟಾಚಾರ ಇದೆಯೋ ಅಲ್ಲಿ ಕಾಂಗ್ರೆಸ್ ಪಕ್ಷದ ಸಂಪರ್ಕಯಿದೆ ಎಂದು ತಿಳಿದು ಬಂದಿದೆ. ಈ ಕಮಿಷನ್ ಹೊಡೆಯುವ ಸಂಸ್ಕೃತಿ ಏನಿದೆ, ರಕ್ಷಣಾ ವ್ಯವಹಾರದಲ್ಲೂ ಕಮಿಷನ್ ಮಾಡುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿತ್ತು. ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ.
ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವುದೇ ಏಕೆ ಪ್ರಾರ್ಥಮಿಕವಾಗಿರುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯೋಧರು ಗುಂಡು ನಿರೋಧಕ ಜಾಕೆಟ್ಗಳನ್ನು ಕೇಳುತ್ತಿರುವಾಗ ಇವರು ವಿವಿಐಪಿ ಹೆಲಿಕಾಪ್ಟರ್ ಗಳನ್ನು ಏಕೆ ಖರೀದಿಸುತ್ತಿದ್ದರು? ಎಂದು ಗೌರವ ಬಾಟಿಯಾ ಪ್ರಶ್ನಿಸಿದ್ದಾರೆ.